ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟೀಲು ದೇವಸ್ಥಾನದ ಆರ್ಚಕರ ಜಗಳ ಮತ್ತೊಮ್ಮೆ ವಿಕೋಪಕ್ಕೆ

By Staff
|
Google Oneindia Kannada News

ಬಜ್ಪೆ : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ವಿವಾದ ಮತ್ತೊಮ್ಮೆ ವಿಕೋಪಕ್ಕೆ ತಿರುಗಿದ್ದು, ಹಿರಿಯ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣರ ಮೇಲೆ ಮಂಗಳವಾರ ಹಲ್ಲೆ ನಡೆದಿದೆ.

ಮುಖ್ಯ ಅರ್ಚಕ ಸ್ಥಾನಕ್ಕೆ ಕಳೆದ ವರ್ಷದಿಂದ ಕಿತ್ತಾಟ ನಡೆಯುತ್ತಿದ್ದು, ಮತ್ತೊಂದು ಗುಂಪಿಗೆ ಸೇರಿದ ಹರಿನಾರಾಯಣ ಆಸ್ರಣ್ಣ ಅವರು 12.390ರ ಹೊತ್ತಿಗೆ ಪ್ರಸಾದ ವಿತರಿಸುತ್ತಿದ್ದಾಗ ಲಕ್ಷ್ಮಿ ನಾರಾಯಣ ಆಸ್ರಣ್ಣರ ಮೇಲೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ.

ಅರ್ಚಕರ ನಡುವೆ ನಡೆದ ಜಗಳ ಶಮನಗೊಳಿಸಲು ಕಟೀಲಿಗೆ ಧಾವಿಸಿದ ಹರಿಕೃಷ್ಣ ಪುನರೂರು ಅವರ ಮೇಲೂ ಹಲ್ಲೆಗೆ ಪ್ರಯತ್ನಿಸಲಾಗಿದೆ. ಪುನರೂರು ಅವರು ತಮ್ಮ ಮೇಲೆ ಕೈ ಮಾಡಿದ ಹರಿನಾರಾಯಣ ಆಸ್ರಣ್ಣ ಮತ್ತವರ ಗುಂಪಿನ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾಯಗೊಂಡಿರುವ ಲಕ್ಷ್ಮೀ ನಾರಾಯಣ ಆಸ್ರಣ್ಣರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X