ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್‌, ಕೇಂಬ್ರಿಡ್ಜ್‌ ಮಟ್ಟಕ್ಕೆ ಬೆಳೆವ ವಿದ್ಯಾಸಂಸ್ಥೆಗಳು ನಮ್ಮಲ್ಲಿವೆ

By Staff
|
Google Oneindia Kannada News

ಹಾಸನ : ಸುತ್ತೂರು ಹಾಗೂ ಸಿರಿಗೆರೆ ಬೃಹನ್ಮಠದ ವಿದ್ಯಾಸಂಸ್ಥೆಗಳಿಗೆ ಸ್ವಾಯತ್ತ ವಿಶ್ವವಿದ್ಯಾಲಯಗಳ ಸ್ಥಾನಮಾನ ನೀಡಬೇಕು ಎಂದು ಸಂಯುಕ್ತ ಜನತಾದಳದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಆಗ್ರಹಿಸಿದ್ದಾರೆ.

ಜಿಲ್ಲೆಯ ಅರಸೀಕೆರೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ದ್ವಿತೀಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯನ್ನು ವಿದೇಶಗಳಲ್ಲಿ ಸರಕಾರ ವಹಿಸುವುದಿಲ್ಲ. ಅಲ್ಲಿ ವಿಶ್ವಸ್ಥ ಮಂಡಳಿಗಳಿಗೆ ಕಾರ್ಯನಿರ್ವಹಣೆ ಅಧಿಕಾರ ಹಾಗೂ ಅನುದಾನ ನೀಡಲಾಗುತ್ತದೆ. ಕೇಂಬ್ರಿಡ್ಜ್‌, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ಸಮರ್ಥವಾಗಿ ಬೆಳೆಯಬಲ್ಲ ವಿದ್ಯಾಸಂಸ್ಥೆಗಳು ಕರ್ನಾಟಕದಲ್ಲಿವೆ. ಅಂತಹ ಸಮರ್ಥ ವಿದ್ಯಾಸಂಸ್ಥೆಗಳ ಸಾಲಿನಲ್ಲಿ ಸಿರಿಗೆರೆ ಹಾಗೂ ಸುತ್ತೂರು ವಿದ್ಯಾಸಂಸ್ಥೆಗೆಳು ನಿಲ್ಲುತ್ತವೆ ಎಂದರು.

ಭಾರತ ಈ ಹೊತ್ತು ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸುತ್ತಿದೆ. ಅದೇ ಹೊತ್ತಿನಲ್ಲಿ ನೈತಿಕ ಅಧಃಪತನವೂ ಆಗುತ್ತಿದೆ ಎಂಬುದೇ ವಿಷಾದದ ಸಂಗತಿ ಎಂದು ಅವರು ಹೇಳಿದರು. ರಾಜಕಾರಣಿಗಳ ಕೈಯಲ್ಲಿ ಹಣ, ಅಧಿಕಾರ ಸೇರಿದಂತೆಲ್ಲಾ ಹಣದ ದಾಹ ಹೆಚ್ಚುತ್ತಿದೆ, ನೀತಿ, ನಿಯಮಗಳು ಗಾಳಿಗೆ ತೂರಿ ಹೋಗಿವೆ ಎಂದೂ ಅಭಿಪ್ರಾಯಪಟ್ಟರು.

ವೈಜ್ಞಾನಿಕ ಕ್ರಾಂತಿಯ ಜತೆಗೆ ಭರತವರ್ಷದಲ್ಲಿ ಸಾಮಾಜಿಕ ಕ್ರಾಂತಿಯೂ ನಡೆಯಬೇಕು. ಎಲ್ಲ ಮಠಾಧಿಪತಿಗಳೂ ಸಂಯುಕ್ತವಾಗಿ ಪ್ರಯತ್ನಿಸಿದರೆ, ಸಾಮಾಜಿಕ ಹಾಗೂ ಸಂಸ್ಕೃತಿಯ ಉಳಿವಿಗೆ ಕ್ರಾಂತಿಯೇ ಆಗುತ್ತದೆ ಎಂದರು. ಆರೋಗ್ಯ ಸಚಿವ ಮಾಲಕರೆಡ್ಡಿ, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ಸಾರಿಗೆ ಸಚಿವ ಸಗೀರ್‌ ಅಹ್ಮದ್‌, ನರೇಂದ್ರ ರೈ ದೇರ್ಲ, ಲೇಖಕಿ ಭಾನು ಮುಷ್ತಾಕ್‌, ಸುತ್ತೂರು ವೀರ ಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X