ಇನ್ನು ಮುಂದೆ ಕ್ರಿಕೆಟ್ ಆಡದವರು ಆಯ್ಕೆ ಸಮಿತಿ ಸದಸ್ಯರಾಗುವಂತಿಲ್ಲ
ಮುಂಬೈ : ಬುಧವಾರ 8 ತಾಸುಗಳ ದೀರ್ಘ ಕಾಲದ ಸಭೆ ನಡೆಸಿದ ಬಿಸಿಸಿಐನ ಕ್ರೀಡಾ ಸಂಹಿತೆ ಸಮಿತಿ ಈಗ ಇರುವ 5 ಮಂದಿ ದೊಡ್ಡವರ ಆಯ್ಕೆ ಸಮಿತಿ ಪದ್ಧತಿಯನ್ನೇ ಕ್ರಿಕೆಟ್ನಲ್ಲಿ ಮುಂದುವರೆಸಲು ನಿರ್ಧರಿಸಿತು. ಆದರೂ ಈ ಆಯ್ಕೆಯಲ್ಲಿ ಕೆಲವು ಪಾಬಂದಿಗಳನ್ನು ವಿಧಿಸಿ ಮಾರ್ಪಾಟು ಮಾಡಲು ಶಿಫಾರಸ್ಸು ಮಾಡಿತು. ಅವುಗಳೆಂದರೆ-
- ಕ್ರಿಕೆಟಿಗ ನಿವೃತ್ತಿಯಾದ 20 ವರ್ಷಗಳ ಕಾಲ ಕ್ರೀಡೆಯ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿದ್ದರೆ ಅಂತಹವ ಆಯ್ಕೆ ಸಮಿತಿ ಸದಸ್ಯನಾಗಲು ಅನರ್ಹ
- ಪ್ರತಿಯಾಂದು ವಲಯದ ಆಯ್ಕೆ ಸಮಿತಿ ಸದಸ್ಯನಾಗಲು ಕನಿಷ್ಠ 15 ಟೆಸ್ಟ್ ಪಂದ್ಯಗಳನ್ನಾಡಿರಬೇಕು
- ಕನಿಷ್ಠ 20 ಮೊದಲ ದರ್ಜೆ ಪಂದ್ಯಗಳನ್ನಾಡಿದ್ದು, ಕ್ರಿಕೆಟಿಗನಾಗಿ ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳಾಗಿರಬೇಕು
- ಬಿಸಿಸಿಐನ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ ಐದೂ ವಲಯಗಳ ಪ್ರತಿನಿಧಿಗಳೂ ಸೇರಿದಂತೆ 23 ಸದಸ್ಯರಿರರಬೇಕು
- ಕಾರ್ಯಕಾರಿ ಸಮಿತಿ ಸಭೆಯಲ್ಲಿ ಐದು ಉಪಾಧ್ಯಕ್ಷರಿಗೆ ಮತ ಹಾಕುವ ಹಕ್ಕು ಇರುತ್ತದೆ
- ಬಿಸಿಸಿಐಗೆ ಅಧ್ಯಕ್ಷರ ನೇಮಕಾತಿ ವಲಯಗಳ ಸರದಿಯಲ್ಲಿ ಆಗಬೇಕು. ಕೇಂದ್ರ, ದಕ್ಷಿಣ, ಪೂರ್ವ, ಉತ್ತರ ಹಾಗೂ ನಂತರ ಪಶ್ಚಿಮ ಈ ಸರದಿಯಲ್ಲಿ ಒಂದೊಂದು ವಲಯದಿಂದಲೂ ಒಬ್ಬೊಬ್ಬ ಅಧ್ಯಕ್ಷರನ್ನು ಒಬ್ಬರಾದ ಮೇಲೊಬ್ಬರಂತೆ ಆಯ್ಕೆ ಮಾಡಬೇಕು
- ಕಾರ್ಯದರ್ಶಿ ಮತ್ತು ಖಜಾಂಚಿಯ ಅಧಿಕಾರ ಕಾಲಾವಧಿ 5 ವರ್ಷಗಳು
- ಒಬ್ಬ ಅಭ್ಯರ್ಥಿ ಸತತ 3 ವರ್ಷ ಮಾತ್ರ ಅಧ್ಯಕ್ಷ ಹುದ್ದೆಯ ಮರು ಚುನಾವಣೆಯಲ್ಲಿ ಸ್ಪರ್ಧಿಸಬಹುದು
- ವಾರ್ಷಿಕ ಸಾಮಾನ್ಯ ಸಭೆಗೆ ನಡೆಯುವ ಚುನಾವಣೆಗಳಲ್ಲಿ ಜನಸತ್ತಾತ್ಮಕ ನೀತಿಯನ್ನು ಅಳವಡಿಸಿಕೊಳ್ಳಬೇಕು
- ಚುನಾವಣೆ ನಡೆಯುವ 24 ಗಂಟೆಗಳೊಳಗೆ ಯಾವುದೇ ಹುದ್ದೆಯ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದು
- ಕಾರ್ಯಕಾರಿ ವಾರ್ಷಿಕ ಸಭೆಗಾಗಲೀ, ಕಾರ್ಯಕಾರಿ ಸಮಿತಿಯ ಸಭೆಗಳಿಗಾಗಲೀ ಹಾಜರಾಗುವ ಪ್ರತಿನಿಧಿಗಳ ಹೆಸರನ್ನು 7 ದಿನ ಮುಂಚೆ ಸಂಬಂಧಪಟ್ಟ ಪ್ರಾಧಿಕಾರ ಮಂಡಲಿಯ ಕಾರ್ಯದರ್ಶಿಗೆ ಲಿಖಿತ ಸಂದೇಶದ ಮೂಲಕ ತಿಳಿಸಬೇಕು.
(ಯುಎನ್ಐ)
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications