ದಿಸ್ ಈಸ್ ಸಮ್ಮರ್ !
ಅಕ್ಟೋಬರ್ನ ಚಳಿಗಾಲದ ದಿನಗಳಲ್ಲಿಯೂ ಮಳೆ ನುಸುಳಿ ನುಸುಳಿ ಬರುತ್ತಿದ್ದದ್ದು ಗೊತ್ತಲ್ಲ ! ಆದರೆ ಫೆಬ್ರವರಿ ಬರುವುದೇ ತಡ . ಚಳಿ ಮುದುರಿ ಮಲಗಿದೆ. ಬೆಳಿಗ್ಗೆ ಆಫೀಸಿಗೆ ಬಂದ ಕೂಡಲೇ ಕೈ ಎಸಿ ಸ್ವಿಚ್ನ ಮೇಲೆ ಹೋಗುತ್ತದೆ. ಶೂಸ್ನೊಳಗೆ ಬೇಯುವ ಕಾಲು ಸೆಕೆಗಾಲ ಬಂದಿದೆ ಅಂತ ಸಾರಿದರೆ, ವಾರ್ಡ್ರೋಬಿನಲ್ಲಿ ಕಾಟನ್ ಸೀರೆ, ಶರಟುಗಳು ತೂಗುತ್ತಿವೆ.
ಸನ್ ಬರ್ನ್, ಸುಡುಬಿಸಿಲಿಗೆ ನಿಮ್ಮ ಚರ್ಮ ಕಪ್ಪಾಗುವುದನ್ನು ತಡೆಯಲು ಕ್ರೀಮ್ ಕಂಪೆನಿಗಳು ಸಾಲು ಸಾಲು ಹೊಸ ನಮೂನೆಯ ಕ್ರೀಮುಗಳ ಜಾಹೀರಾತು. ಮಕ್ಕಳ ಮುಂದೆ ದೆವ್ವದಂತೆ ನಿಂತಿರುವ ಪರೀಕ್ಷೆಗಳು, ಮತ್ತೆ ಆ ಭೂತದ ಹಿಂದೆ ಅವಿತು ಕೂತಿರುವ ಸಮ್ಮರ್ ಕ್ಯಾಂಪ್ಗಳು... ಫೆಬ್ರವರಿಯನ್ನು ಒಂಥರಾ ಬೆಚ್ಚಗೆ ಇರಿಸಿದೆ.
ಈ ಕಿಲಕಿಲಾಟದ ನಡುವೆಯೇ ಆಳಕ್ಕಿಳಿಯುತ್ತಿರುವ ಬಾವಿ ನೀರು, ಪಕ್ಕದ ಮನೆಯ ಹಳೇ ಬಾವಿಯಾಳದಲ್ಲಿ ಹಾಕಿರುವ ನೆಲ್ಲಿ ಹಲಗೆಯ ಹತ್ತಿರ ಸಾಗುತ್ತಿರುವ ನೀರು, ಓಡಾಡಲು ಜಾಗ ಸಾಲದೇ ಕೊಡಪಾನದೊಳಗೆ ಸಿಕ್ಕಿ ಹಾಕಿಕೊಂಡು ಮೇಲೆ ಬರುವ ಮೀನುಗಳು... ಏಪ್ರಿಲ್ನ ಧಗೆಯ ಕೆಟ್ಟ ನೆನಪು ತರುತ್ತವೆ.
ಟೆಂಪರೇಚರ್ನ ಸವಾರಿ ವಾರ್ತೆ ಕೇಳುವುದಿದ್ದರೆ, ಬೆಳಗಾಂನಲ್ಲಿ ಕಡಿಮೆ ಅಂದರೆ 15.3 ಸೆಲ್ಷಿಯಸ್ ದಾಖಲಾಗಿದೆ. ಬೆಂಗಳೂರಿನಲ್ಲಿ 14, 15ರ ಆಸು ಪಾಸಿನಲ್ಲಿದ್ದು, ಬೆಳಗ್ಗಿನ ಕೆಲಸಗಳನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ಹವೆ ಇವತ್ತು 21 ಡಿಗ್ರಿಗೇರಿ ‘ದಿಸ್ ಈಸ್ ಸಮ್ಮರ್’ ಅಂತ ನೆನಪಿಸಿದೆ. ನಾಳೆ ನಾಡಿದ್ದೂ ಕೂಡ ಸೂರ್ಯ ನಿಮ್ಮ ಹುಡುಕಿಕೊಂಡು ಬರುವುದಿಲ್ಲ. ಮೋಡಗಳ ಟೆಂಟಿನಡಿಯಲ್ಲಿ ಕಣ್ಣ ಮುಚ್ಚಾಲೆ ಆಡುತ್ತಾನೆ ಅಂತ ಹವಾ ಇಲಾಖೆಯವರು ಹೇಳಿದ್ದಾರೆ. ಅದೇ ಮಾಮೂಲಿ, ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ !
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications