ಮುಳುಗುತ್ತಿರುವ ಅರಿಶಿಣಕ್ಕೆ ಹುಲ್ಲುಕಡ್ಡಿ:ಅರಿಶಿಣ ಬೆಳೆಗಾರರ ವೇದಿಕೆ
ಹುಣಸೂರು : ಭತ್ತ, ಜೋಳ, ಟೊಮೆಟೋ... ಹೀಗೆ ಬೆಲೆ ಕುಸಿತಕ್ಕೆ ತುತ್ತಾದ ಬೆಳೆಗಳ ಸಾಲು ಉದ್ದವಾಗುತ್ತಿದ್ದಂತೆಯೇ ಈ ಸಾಲಿಗೆ ಅರಿಶಿಣ ಕೂಡ ಸೇರುತ್ತಿದೆ. ಈ ಬಾರಿ ಅರಿಶಿಣ ದ ಬೆಲೆ ಕ್ವಿಂಟಾಲ್ಗೆ 2,800 ರೂಪಾಯಿಯಿಂದ ಸಾವಿರ ರೂಪಾಯಿಯ ಆಸುಪಾಸಿಗಿಳಿದಿದೆ.
ಅರಿಶಿಣದ ಬೆಳೆ ಮಾರುಕಟ್ಟೆಯಲ್ಲಿ ನೆಲಕಚ್ಚುತ್ತಿರುವುದನ್ನು ಗಮನಿಸಿದ ರತ್ನ ಪುರಿಯ ರೈತರು ಅರಿಶಿಣ ಬೆಳೆಗಾರರ ವೇದಿಕೆಯನ್ನು ರಚಿಸಿದ್ದಾರೆ. ಶಕ್ತಿ ಕೃಷಿಕರ ವೇದಿಕೆ ಆಶ್ರಯದಲ್ಲಿ 9 ಮಂದಿ ರೈತರ ವೇದಿಕೆ ರಚಿಸಲಾಗಿದೆ. ಈ ತಿಂಗಳ ಕೊನೆಯಲ್ಲಿ ಸಂಸದ ಸಿ. ಎಚ್. ವಿಜಯ ಶಂಕರ ನೇತೃತ್ವದಲ್ಲಿ ವೇದಿಕೆಯ ಸದಸ್ಯರು ಕೊಚ್ಚಿನ್ನಲ್ಲಿರುವ ಕೇಂದ್ರ ಸರಕಾರದ ಮಂಡಳಿಗೆ ಭೇಟಿ ನೀಡುವರು. ಬೆಳೆ ಕುಸಿತದ ಕಾರಣಗಳನ್ನು ಅಧ್ಯಯನ ಮಾಡಿದ ನಂತರ ಮುಂದಿನ ಹೋರಾಟದ ಕ್ರಮಗಳನ್ನು ರೂಪಿಸಲು ವೇದಿಕೆ ನಿರ್ಧರಿಸಿದೆ.
ಅರಿಶಿಣ ಪುಡಿ ಮಾಡಲು 7ಸಾವಿರ ರೂ ಖರ್ಚೇ? : ಎರಡು ವರ್ಷಗಳ ಹಿಂದೆ ಕ್ವಿಂಟಾಲ್ ಅರಿಶಿಣದ ಬೆಲೆ 4 ಸಾವಿರ ರೂಪಾಯಿ. ಮೈಸೂರು, ಚಾಮರಾಜ ನಗರ, ರಾಯಚೂರು, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಅರಿಶಿಣ ಬೆಳೆಯುವ ರೈತರಿಗೆ ಮಾರುಕಟ್ಟೆಯಿರುವುದು ಮಹಾಲಿಂಗಪುರದಲ್ಲಿ. ದಕ್ಷಿಣ ಕರ್ನಾಟಕದವರಿಗೆ ಈ ಮಾರುಕಟ್ಟೆ ದೂರವಾಗುವುದರಿಂದ ತಮಿಳುನಾಡಿನ ಈರೋಡ್ ಮಾರುಕಟ್ಟೆಗೇ ರೈತರು ಶರಣಾಗುತ್ತಾರೆ. ಅಲ್ಲೂ ಮತ್ತೆ ಮಧ್ಯವರ್ತಿಗಳ ಕಾಟ.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಅರಿಶಿಣಕ್ಕೆ ಬೇಡಿಕೆಯೂ ಹೆಚ್ಚಿದೆ. ಆದರೆ ರೈತನ ಕೈಯ್ಯಲ್ಲಿರುವ ಅರಿಶಿಣಕ್ಕೆ ಮಾತ್ರ ಮೂರು ಕಾಸಿಗಿಂತ ಹೆಚ್ಚು ಬೆಲೆ ಬರದೇ ಇರಲು ಕಾರಣವೇನು ಎನ್ನುವುದು ಗೊತ್ತಾಗುತ್ತಿಲ್ಲ. ಅಂಗಡಿಯಲ್ಲಿ 100 ಗ್ರಾಂ ಅರಿಶಿಣ ಪುಡಿಗೆ 8 ರೂಪಾಯಿ, ಆ ಪ್ರಕಾರ ಕ್ವಿಂಟಾಲ್ಗೆ 8 ಸಾವಿರ ರೂಪಾಯಿ. ರೈತನ ಕೈಗೆ ಬರೇ ಸಾವಿರ ರೂಪಾಯಿ ಸಿಗಬೇಕಿದ್ದರೆ, ಅರಿಶಿಣ ಪುಡಿ ಮಾಡಲು 7 ಸಾವಿರ ರೂಪಾಯಿ ಖರ್ಚಾಗುತ್ತದೆಯೇ ಎನ್ನುವುದು ರೈತರ ಪ್ರಶ್ನೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications