ಸಿಗರೇಟು- ಗುಟ್ಕಾ ಪ್ರೇಮಿಗಳಿಗೆ ಸರ್ಕಾರದ ಬ್ರೇಕು
ನವದೆಹಲಿ : ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, 18 ವರ್ಷದೊಳಗಿನ ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಬಂಧನೆ ಸೇರಿದಂತೆ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ವಿತರಣೆಗೆ ನಿಯಂತ್ರಣಗಳನ್ನು ಹೇರುವ ಮಸೂದೆಯನ್ನು ಬರುವ ಆಯವ್ಯಯ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ.
ಬುಧವಾರ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ಈ ವಿಷಯ ತಿಳಿಸಿದರು. 1975 ರ ಸಿಗರೇಟ್ಗಳಿಗೆ ಸಂಬಂಧಿಸಿದ ಮಸೂದೆಯನ್ನು ಬದಲಿಸಲು ಸಂಪುಟ ಸಭೆ ನಿರ್ಧರಿಸಿದ್ದು , ನಿಯಮಗಳನ್ನು ಉಲ್ಲಂಘಿಸುವವರಿಗೆ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
ತಂಬಾಕು ಉತ್ಪನ್ನಗಳ ಗ್ರಾಹಕರಿಗೆ ಹೊಸ ಮಸೂದೆಯು ಇಷ್ಟವಾಗುವುದು ಕಷ್ಟ . ಆದರೆ, ಉದ್ದೇಶಿತ ಕಾಯಿದೆಯು ಧೂಮಪಾನ ಒಲ್ಲದವರ ಪರವಾಗಿದೆ ಎಂದು ಮಹಾಜನ್ ಹೇಳಿದರು. ತಂಬಾಕು ಸಂಬಂಧಿ ವ್ಯಾಧಿಗಳಿಂದ ಪ್ರತಿವರ್ಷ ವಿಶ್ವದಲ್ಲಿ 3 ಮಿಲಿಯನ್ ಸಾವು ಸಂಭವಿಸುತ್ತಿದ್ದು , ಈ ಪೈಕಿ 1 ಮಿಲಿಯನ್ ಸಾವು ಭಾರತದಿಂದಲೇ ವರದಿಯಾಗುತ್ತಿವೆ ಎಂದರು.
ಉದ್ದೇಶಿತ ಮಸೂದೆ ಕುರಿತಂತೆ ಸಂಪುಟ ಸಭೆ 45 ನಿಮಿಷಗಳ ಕಾಲ ಚರ್ಚಿಸಿತು. ತಂಬಾಕು ಉತ್ಪನ್ನಗಳ ಜಾಹಿರಾತು, ವಿತರಣೆ, ವಾಣಿಜ್ಯ ಮುಂತಾದವುಗಳ ನಿಯಂತ್ರಣವನ್ನೂ ಮಸೂದೆ ಹೊಂದಿರುತ್ತದೆ. ಸರ್ಕಾರದ ತಂಬಾಕು ವಿರೋಧಿ ಕಾರ್ಯಕ್ರಮಗಳಿಗೆ ಮಸೂದೆ ಬಲ ನೀಡುತ್ತದೆ ಎಂದು ಹೇಳಿದರು. ಮಸೂದೆಯ ಇನ್ನಿತೆರೆ ಮುಖ್ಯಾಂಶಗಳು -
- ಪ್ಯಾಕ್ಗಳ ಮೇಲೆ ನಿಕೋಟಿನ್ ಮತ್ತು ಟಾರ್ ಪ್ರಮಾಣಗಳ ನಮೂದಿಸುವಿಕೆ
- ಪಾಕೆಟ್ನ ಮೇಲಿನ ಶಾಸನ ವಿಧಿಸಿದ ಎಚ್ಚರಿಕೆಯನ್ನು ಇಂಗ್ಲೀಷಿನ ಜೊತೆಗೆ ಒಂದು ಪ್ರಾದೇಶಿಕ ಭಾಷೆಯಲ್ಲೂ ಮುದ್ರಿಸುವುದು
- ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳು ಪ್ರಾಯೋಜಿಸುವುದಕ್ಕೆ ಸಂಪೂರ್ಣ ತಡೆ
(ಯುಎನ್ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications