Get Updates
Get notified of breaking news, exclusive insights, and must-see stories!

ಅನುಕಂಪಕ್ಕೆ ಇಲ್ಲಿ ಜಾಗವೇ ಇಲ್ಲ, ಅಭಯಹಸ್ತವೇಚಾಚಿದೆ ಅಲ್ಲೆಲ್ಲಾ

ಬೆಂಗಳೂರು : ಗುಜರಾತ್‌ನಲ್ಲಿ ಗಢಗಢ ನಡುಗಿ ತನ್ನ ಸಾವಿರಾರು ಮಕ್ಕಳನ್ನು ತಾನೇ ನುಂಗಿದ ವಸುಂಧರೆಯ ಮುನಿಸಿಗೆ ಕಲ್ಲು ಹೃದಯಿಗಳೂ ಕಂಬನಿ ಮಿಡಿದಿದ್ದಾರೆ. ನಮ್ಮ ದೇಶದ ಭಾಗವೊಂದರ ಜನತೆ ಸಾವು ನೋವಿನ ಸಂಕಟದಲ್ಲಿರುವಾಗ ನಾವು ಸಂತಸದ ಸಮಾರಂಭಗಳನ್ನು ಮಾಡಿ, ಸಾವಿರಾರು ರುಪಾಯಿ ಖರ್ಚು ಮಾಡುವುದು ಬೇಡ ಎಂಬ ನಿಲುವನ್ನು ಕನ್ನಡನಾಡಿನ ಅನೇಕ ಸಂಘ ಸಂಸ್ಥೆಗಳು ತಳೆದಿದ್ದಾರೆ. ಈ ನಿಲವು ಸ್ವಾಗತಾರ್ಹ.

ರಾಜಕೀಯ : ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೂ ಈ ಪಟ್ಟಿಯಲ್ಲಿ ಸೇರಿವೆ. ಜನವರಿ 26ರಂದು ಧರೆ ನಡುಗಿದ ತತ್‌ಕ್ಷಣವೆ ರದ್ದಾದ ಕಾರ್ಯಕ್ರಮಗಳಲ್ಲಿ ಪ್ರಮುಖವಾದದ್ದು, ರಾಜ್ಯದಲ್ಲಿ ಸಮಾವೇಶಗೊಳ್ಳಲಿದ್ದ ಕಾಂಗ್ರೆಸ್‌ ರಾಷ್ಟ್ರೀಯ ಅಧಿವೇಶನ.

ಸಾಹಿತ್ಯ - ಸಂಸ್ಕೃತಿ : ಇದರ ಬೆನ್ನಲ್ಲೇ ಫೆ.2ರಂದು ಕವಿಶೈಲದಲ್ಲಿ ಹಾಗೂ ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸ್ಮಾರಕ ಹಾಗೂ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸಾಹಿತ್ಯಿಕ ಕಾರ್ಯಕ್ರಮದ ಮುಂದೂಡಿಕೆ. ರಾಜ್ಯದ ಹಲವು ಪ್ರತಿಷ್ಠಿತ ಶಾಲೆ ಕಾಲೇಜುಗಳ ಪೂರ್ವ ನಿಗದಿತ ಕಾಲೇಜ್‌ ಡೇ, ಸ್ಕೂಲ್‌ ಡೇಗಳೂ ರದ್ದಾದವು. ಈ ಸಮಾರಂಭಕ್ಕೆ ಮಾಡಲುದ್ದೇಶಿಸಿದ್ದ ಹಣವನ್ನು ಸಂಸ್ಥೆಗಳು ಗುಜರಾತ್‌ ಭೂಕಂಪ ಪರಿಹಾರ ನಿಧಿಗೆ ಅರ್ಪಿಸಿದವು.

ಧಾರ್ಮಿಕ : ಈಗ ಇದೇ ಕಾರಣಕ್ಕಾಗಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಡ್ಡಪಲ್ಲಕ್ಕಿ ಉತ್ಸವವೂ ರದ್ದಾದ ಸುದ್ದಿ ಹಾಸನದಿಂದ ಬಂದಿದೆ. ಅಲ್ಲಿ ಭಾನುವಾರ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಈ ವಿಷಯ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+