ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಪ್ರೇಮಿಗಳ ದಿನಾಚರಣೆ ಮುನ್ನಾ ಸಿದ್ಧತೆಗೆ ಸಕಾರಾತ್ಮಕ ಪ್ರತಿಕ್ರಿಯೆ. ವ್ಯವಹಾರದಲ್ಲಿ ಸ್ವಲ್ಪವೂ ಕೈ ಸಡಿಲಿಸಬೇಡಿ.ವೃಷಭ : ಮನದಂಗಳದ ತುಂಬಾ ಚೆಲ್ಲಿದ ಕನಸು ಇನಿತಿನಿತೇ ಬಗೆಹರಿಯುತ್ತೆ. ಆ ನಿಟ್ಟಿನಲ್ಲಿ ಈವತ್ತು ಪ್ರಮುಖ ಹೆಜ್ಜೆಯನ್ನು ನೀವು ಇಡಲಿದ್ದೀರಿ.
ಮಿಥುನ : ತಳಮಳ, ಸತಮತ, ಒಳಗೊಳಗೇ ಗುಸುಗುಸು. ಗೊಂದಲ ಎಳೆಯನ್ನು ನಂಬಿದವರಲ್ಲಿ ಹರಿಬಿಡಿ. ಮನಸ್ಸು ಹಗೂರಾಗುತ್ತೆ.
ಕಟಕ : ಕೈಕೊಟ್ಟಿದ್ದ ಆರೋಗ್ಯದಲ್ಲಿ ಸುಧಾರಣೆ. ವ್ಯವಹಾರದಲ್ಲಿ ಎರಡು ಮೆಟ್ಟಿಲು ಹಾರುವ ಅವಕಾಶ. ಅದನ್ನು ಆತುಕೊಂಡು ನುಗ್ಗುವ ಛಾತಿ ಬೇಕಷ್ಟೆ.
ಸಿಂಹ : ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಬಿಟ್ಟುಬಿಡಿ. ನಿಮ್ಮ ಸಾಮರ್ಥ್ಯ ಎಷ್ಟೆಂಬುದು ನಿಮಗೇ ಗೊತ್ತಿಲ್ಲ. ಅದು ನಿಮ್ಮ ವಿನೀತ ಪ್ರಜ್ಞೆಯೂ ಹೌದು. ಸತ್ವ ಹಾಳಾಗದಂತೆ ಕಾಪಿಡಿ.
ಕನ್ಯಾ : ಅಪ್ಪ- ಪ್ರೇಮಿ. ಎರಡೂ ಬೇಕು. ಒಂದು ಉತ್ತರ, ಒಂದು ದಕ್ಷಿಣ. ಕೊಲ್ಲುವ ದ್ವಂದ್ವ. ಕನ್ವಿನ್ಸ್ ಮಾಡೋ ಶಕ್ತಿ ನಿಮ್ಮಲ್ಲಿದೆ. ತಲೆ ಮೇಲಿಂದ ಕೈ ತೆಗೆಯಿರಿ.
ತುಲಾ : ಮಲಗುವ ಮುನ್ನ ನಿಮ್ಮನ್ನು ನೀವು ವಿಮರ್ಶೆಗೆ ಒಡ್ಡಿಕೊಳ್ಳಿ. ಮಾಡಿರುವ ಹರಿಕತ್ತು ಪತ್ತೆಯಾಗುತ್ತೆ. ಅದೇ ನಿಮ್ಮ ಒದ್ದಾಟಕ್ಕೆ ಕಾರಣ.
ವೃಶ್ಚಿಕ : ಬಹು ದಿನಗಳಿಂದ ಸಿಗದ ಸಂಪರ್ಕ ಇಂದು ಸಿಕ್ಕುತ್ತದೆ. ಮನೆಮಂದಿಯಾಂದಿಗೆ ಹರಟೆ, ಒಂದಷ್ಟು ಸಲಹೆ, ಬಾಸಿಸಮ್, ಗೆಳೆಯ ಗೆಳತಿಯರಿಗೆ ಒಂದು ಹಿಡಿ ಭಾಷಣ... ಹೀಗೇ ದಿನವಿಡೀ ನಿಮ್ಮದೇ. ನಾಳೆ ಗ್ರಹಚಾರ ಕಾದಿದೆ.
ಧನಸ್ಸು :ತುಂಡು ಭೂಮಿಗಾಗಿ ತುತ್ತು ಕಳೆದುಕೊಳ್ಳುವ ಸಾಹಸಕ್ಕೆ ಕೈಹಾಕಬೇಡಿ. ಇನ್ನೊಂದು ದಾರಿಯಲ್ಲಿ ಎಕರೆಗಟ್ಟಲೆ ಫಸಲು ನಿಮಗಾಗಿ ಬೆಳೆದು ನಿಂತಿದೆ.
ಮಕರ : ಮೋಕ್ಷಕ್ಕೆರಡಕ್ಕರವೇ ‘ಸಾಕು’. ಸಾಧನೆ- ಸಿದ್ಧಿಗೆ ಕೈಹಚ್ಚೋದು ಬಿಟ್ಟು ತರಬರ ಪುರಲೆ ಉರಿಸೋದರಲ್ಲೇ ಕಾಲ ಕಳೆದರೆ ಹೇಗೆ ? ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಯತ್ನವನ್ನಾದರೂ ಮಾಡಿ.
ಕುಂಭ : ಪ್ರಥಮ ಚುಂಬನಕ್ಕೆ ಹೊರಟಿದ್ದೀರಿ. ದಂತ ಪಂಕ್ತಿಯನ್ನು ಕನ್ನಡಿಯಲ್ಲೊಮ್ಮೆ ನೋಡಿಕೊಂಡು ಮುಂದುವರೆಯೋದು ಒಳಿತು.
ಮೀನ : ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು. ಬಹುದಿನಗಳಿಂದ ಕಾಣದ ಕೆಂಸೂರ್ಯ, ಹಾರೋ ಹಕ್ಕಿ, ಆಡೋ ಮಕ್ಕಳು ಮನಸ್ಸಿಗೆ ಮುದ ನೀಡುತ್ತಿವೆ. ಕಂಪ್ಯೂಟರ್ ಮುಂದಿನ ಶುಷ್ಕ ಜಗತ್ತಿಗೆ ಇವತ್ತಿನ ಮಟ್ಟಿಗೆ ಬಿಡುವು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications