ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಮಕೂಡಲುವಿನಲ್ಲಿ ದಕ್ಷಿಣ ಕುಂಭಮೇಳ ವಿಧ್ಯುಕ್ತವಾಗಿ ಪ್ರಾರಂಭ

By Staff
|
Google Oneindia Kannada News

ತಿರುಮಕೂಡಲು : ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ, ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಹಾಗೂ ರಾಜ ರಾಜೇಶ್ವರಿ ಪೀಠದ ತಿರುಚಿ ಸ್ವಾಮೀಜಿ ಅವರು ಇಲ್ಲಿನ ಪವಿತ್ರ ಅಗಸ್ತ್ಯೇಶ್ವರ ದೇವಾಲಯದಲ್ಲಿ ಜಂಟಿಯಾಗಿ ಪೂಜೆ ಸಲ್ಲಿಸುವುದರೊಂದಿಗೆ ದಕ್ಷಿಣ ಕುಂಭಮೇಳ ಬುಧವಾರ ವಿಧ್ಯುಕ್ತವಾಗಿ ಪ್ರಾರಂಭವಾಯಿತು.

ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಪ್ರಯುಕ್ತ ನೂರಾರು ಭಕ್ತರು ಪುಣ್ಯಸ್ನಾನ ಮಾಡಿದರು . ಉತ್ತರದ ಕುಂಭಮೇಳಕ್ಕೆ ಪರ್ಯಾಯವೆಂದು ಭಾವಿಸಿರುವ ಹಾಗೂ ದಕ್ಷಿಣ ಕುಂಭಮೇಳ ಎಂದು ಭಾವಿಸಿರುವ ಈ ಉತ್ಸವದಲ್ಲಿ ಭಾಗವಹಿಸಲು ರಾಜ್ಯ ಹಾಗೂ ನೆರೆ ರಾಜ್ಯಗಳ ನೂರಾರು ಧಾರ್ಮಿಕ ಶ್ರದ್ಧಾವಂತರು ಆಗಮಿಸುತ್ತಿದ್ದಾರೆ.

ಉತ್ಸವ ಕಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಜಿಲ್ಲಾಡಳಿತ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಮಾಡಿದೆ. 1200 ಪೊಲೀಸರೊಂದಿಗೆ ಹೋಂಗಾರ್ಡ್‌ಗಳು ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X