15 ದಿನಗಳ ಮಟ್ಟಿಗೆ ಬಾಯ್ಕಾಟ್ ಪಾಕ್ ಕ್ರಿಕೆಟ್ ಹೆಡ್ ಮಾಸ್ಟರ್
ಕರಾಚಿ : ಇಂಗ್ಲೆಂಡ್ನ ಮಾಜಿ ಬ್ಯಾಟಿಂಗ್ ತಾರೆ ಜೆಫ್ರಿ ಬಾಯ್ಕಾಟ್ ಈಗ ಪಾಕಿಸ್ತಾನ ಕ್ರಿಕೆಟ್ ತಂಡದ ತರಬೇತುದಾರ. ಅವರ ಫೀಸ್ ಕೇವಲ 30 ಸಾವಿರ ಪೌಂಡ್, ಅದೂ ಬರೇ 15 ದಿನಕ್ಕೆ. ಅವರು ಕೋಚ್ ಕೆಲಸ ಮಾಡುವುದೂ 15 ದಿನಗಳು ಮಾತ್ರ !
ಪಾಕಿಸ್ತಾನದ ಮಾಜಿ ಟೆಸ್ಟ್ ಕ್ರಿಕೆಟ್ ತಾರೆಗಳು ಇದಕ್ಕೆ ಅಬ್ಬಾ, ಇದ್ಯಾವ ನ್ಯಾಯ ಎಂದು ದನಿಯೆತ್ತಿದ್ದರೂ ಪಾಕ್ ಕ್ರಿಕೆಟ್ ಮಂಡಲಿ (ಪಿಸಿಬಿ) ಅದ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಈ ನಿರ್ಣಯ ಕೈಗೊಂಡಿದೆ. 2005ರ ಹೊತ್ತಿಗೆ ತನ್ನ ತಂಡವನ್ನು ಮಾದರಿ ಕ್ರಿಕೆಟ್ ತಂಡವನ್ನಾಗಿಸಲು ಪಿಸಿಬಿ ಪಣ ತೊಟ್ಟಿದ್ದು ‘ವಿಷನ್ 2005’ ಎಂಬ ಕಾರ್ಯಕ್ರಮ ರೂಪಿಸಿದೆ. ಬಾಯ್ಕಾಟ್ ಅವರಿಂದ 15 ದಿನಗಳಕಾಲ ತಂಡಕ್ಕೆ ಪಾಠ ಹೇಳಿಸುವುದು ಈ ಯೋಜನೆಯ ಮೊದಲ ಹೆಜ್ಜೆ.
ಅಷ್ಟೇಅಲ್ಲ, ಪಾಕಿಸ್ತಾನ ಕ್ರಿಕೆಟ್ ಮಂಡಲಿ ಅಧಿಕಾರಿಗಳು ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಒಂದೇ ಸಮ 15 ಟೆಸ್ಟ್ ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ತಂಡದ ತರಬೇತಿ ತಂತ್ರಗಳನ್ನು ಅರಿಯುವ ಉದ್ದಿಶ್ಯ ಅವರದು. ಆಸ್ಟ್ರೇಲಿಯಾ ಆಟಗಾರು ಈ ಮಟ್ಟಿಗೆ ಹೇಗೆ ಪಳಗಿದ್ದಾರೆ ಎನ್ನುವ ತಂತ್ರ ಕದ್ದು ತಂದು, ಪಾಕಿಸ್ತಾನದ ಆಟಗಾರರನ್ನೂ ಅಂತೆಯೇ ತರಪೇತುಗೊಳಿಸುವುದು ಅಧಿಕಾರಿಗಳ ಪ್ರವಾಸದ ಗುರಿ.
ಪಿಸಿಬಿ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ ತಾಕ್ವಿರ್ ಜಿಯಾ ಕಡಕ್ ಆಗಿಬಿಟ್ಟಿದ್ದಾರೆ. ದುಡ್ಡಿನ ಮುಖ ನೋಡಿಕೊಂಡು ಆಟ ಕೆಡಿಸಿಕೊಳ್ಳಲು ಅವರು ಸುತರಾಂ ಸಿದ್ಧರಿಲ್ಲವಂತೆ. ಈ ಕಾರಣಕ್ಕಾಗೇ ಜೆಫ್ರಿ ಬಾಯ್ಕಾಟ್ ನೇಮಕದ ವಿಷಯದಲ್ಲಿ ಕೆಲವು ಅಧಿಕಾರಿಗಳ ನಕಾರವನ್ನೂ ಜಿಯಾ ನಿರ್ಲಕ್ಷಿಸಿದ್ದಾರೆ. ಈ ಹೊತ್ತು ಇದು ದುಬಾರಿ ಎನಿಸಬಹುದು. ಆದರೆ ಪಾಕ್ ಕ್ರಿಕೆಟ್ನ ಭವಿತವ್ಯದ ದೃಷ್ಟಿಯಲ್ಲಿ ಇದು ಅತ್ಯಗತ್ಯ ಎಂಬುದು ಜಿಯಾ ವಾದ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂತಿಕಾಬ್ ಆಲಂ ಒಂದು ಒಳ್ಳೆ ಪ್ರಶ್ನೆ ಎಸೆದಿದ್ದಾರೆ- ಬಾಯ್ಕಾಟ್ ಅಷ್ಟೊಂದು ಬೆಲೆ ಬಾಳುವ ಹಾಗೂ ಅರ್ಹ ತರಬೇತುದಾರರಾದರೆ, ಅವರಿಗೆ ಈವರೆಗೆ ಇಂಗ್ಲೆಂಡ್ ತಂಡದ ಕೋಚ್ ಆಫರ್ ಯಾಕೆ ಕೊಟ್ಟಿಲ್ಲ . ಇದಕ್ಕೆ ಜಿಯಾ ಅವರೇ ಉತ್ತರ ಕೊಡಬೇಕು.
ಇಷ್ಟೆಲ್ಲಾ ಗಜಿ ಬಿಜಿ ನಡುವೆ ಭಾನುವಾರ ಸಂಜೆ ಲಾಹೋರ್ಗೆ ಆಗಮಿಸಿದ ಬಾಯ್ಕಾಟ್ ಹೇಳುತ್ತಾರೆ- ‘ನಾನು ಪಾಕಿಸ್ತಾನಿ ಆಟಗಾರರ ಸ್ವಾಭಾವಿಕ ಶೈಲಿಯ ಆಟ ಮತ್ತು ಅವರ ಅದ್ಭುತ ಪ್ರತಿಭೆಗೆ ಮನಸೋತು ಕೋಚ್ ಆಗಿ ಕೆಲಸ ಮಾಡಲು ಒಪ್ಪಿದ್ದೇನೆ. ವೈರುಧ್ಯಗಳನ್ನು ಬದಿಗೊತ್ತಿ ನನ್ನ ಮೇಲೆ ವಿಶ್ವಾಸ ಇಟ್ಟಿರುವ ಪಿಸಿಬಿ ಯತ್ನಕ್ಕೆ ಖಂಡಿತ ಅರ್ಥ ಕೊಡುತ್ತೇನೆ. ಸಯೀದ್ ಅನ್ವರ್, ಇಂಜಮಾಮ್- ಉಲ್- ಹಕ್ ಅವರಂಥ ಪಳಗಿರುವ ಆಟಗಾರರಿಗೆ ಯಾವುದೇ ತರಪೇತಿಯ ಅಗತ್ಯವಿಲ್ಲ. ಉದಯೋನ್ಮುಖ ಪ್ರತಿಭೆಗಳನ್ನು ಪಾಲಿಷ್ ಮಾಡುವುದು ನನ್ನ ಕೆಲಸ’.
(ಎಎಫ್ಪಿ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications