Get Updates
Get notified of breaking news, exclusive insights, and must-see stories!

ಶಿವ ಶಿವ ! ಕುಡಿಯುವ ನೀರಿನಲ್ಲಿ ಹಾಲಾಹಲ

ಧಗೆ ಹೊತ್ತ ಬೇಸಿಗೆಯ ಒಂದೊಂದೇ ದಳಗಳು ಹಗಲು ಇರುಳುಗಳ ಅಸಹನೀಯವಾಗಿಸುತ್ತಾ ರಾಜ್ಯಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರದ ಕೂಗುಗಳು, ಸಾಂಕ್ರಾಮಿಕ ರೋಗಗಳ ವಾರ್ಷಿಕ ನೆನಪುಗಳು ಈ ಬಾರಿ ಬರದಿರಲಿ ಎಂದು ನೆನೆಯೋಣ.

ರಾಜೀವ್‌ಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಮಿಷನ್‌- ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಸಹಯೋಗದೊಂದಿಗೆ ಕುಡಿಯುವ ನೀರಿನ ಬಗ್ಗೆ ನಡೆಸಿರುವ ಸಮೀಕ್ಷೆ ಯಲ್ಲಿನ ಅಂಕಿ ಅಂಶಗಳು ಗಾಬರಿ ಹುಟ್ಟಿಸುವಂತಿವೆ. ರಾಜ್ಯದ 14 ಜಿಲ್ಲೆಗಳ 9060 ಜಿಲ್ಲೆಗಳಲ್ಲಿ ನ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ . ರಾಸಾಯಿನಿಕ ಅಂಶ ಹೆಚ್ಚಿರುವ ಈ ನೀರು ಕುಡಿಯುವುದರಿಂದ ಹಲ್ಲು ಹಾಗೂ ಮೂಳೆಗೆ ಸಂಬಂಧಿಸಿದ ರೋಗಗಳು ಕಾಡುತ್ತವೆ ಎಂದು ವರದಿ ಎಚ್ಚರಿಸಿದೆ.

ಬಳ್ಳಾರಿ, ದಾವಣಗೆರೆ, ಹಾವೇರಿ, ಬೆಳಗಾವಿ, ಬಿಜಾಪುರ, ಗದಗ, ಧಾರವಾಡ, ಉತ್ತರಕನ್ನಡ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ 99 ತಾಲ್ಲೂಕುಗಳಲ್ಲಿ ಅಂತರ್ಜಲದ ಪರೀಕ್ಷೆ ನಡೆಸಲಾಗಿದ್ದು , ಅಂತರ್ಜಲದಲ್ಲಿ ಲವಣಾಂಶ, ಕಬ್ಬಿಣ, ನೈಟ್ರೇಟ್‌ ಅಂಶಗಳು ಹೆಚ್ಚಿರುವುದು ತಿಳಿದುಬಂದಿದೆ.

ಸರ್ಕಾರ ಈ ಸಮಸ್ಯೆಯನ್ನು ಮನಗಂಡಿದೆ, 7.5 ಕೋಟಿ ರುಪಾಯಿಗಳಲ್ಲಿ ಪರ್ಯಾಯ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುತ್ತಿದೆ ಎಂದು ವರದಿಯಾಂದು ತಿಳಿಸಿದೆ. ಆದರೆ, ಅದು ಕಾರ್ಯಗತವಾಗುವುದು ಯಾವಾಗ ಅನ್ನುವುದು ಖಚಿತವಾಗಿಲ್ಲ .

ಸೋಮವಾರದ ಬಿಸಿಲು ಧಗೆ : ರಾಜ್ಯದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಷಿಯಸ್‌ ಬೆಳಗಾವಿಯಲ್ಲಿ ದಾಖಲಾಗಿತ್ತು . ರಾಜ್ಯಾದ್ಯಂತ ಯಥಾ ಪ್ರಕಾರದ ಒಣಹವೆಯದ್ದೇ ಪ್ರಾಬಲ್ಯ. ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಒಳಭಾಗದ ಕೆಲವೆಡೆ ತಾಪಮಾನದಲ್ಲಿ ಕುಸಿತವಿತ್ತು . ಉಳಿದಂತೆ ಮಂಗಳವಾರವೂ ರಾಜ್ಯದಲ್ಲಿ ಒಣಹವೆಯದ್ದೇ ಪ್ರಾಬಲ್ಯ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮಂಗಳವಾರ ಮೋಡ ಕವಿದ ಆಕಾಶದ ದೃಶ್ಯಗಳು ಸಾಮಾನ್ಯವಾದರೂ ದಿನದ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+