Get Updates
Get notified of breaking news, exclusive insights, and must-see stories!

ಮಠ, ದೇವಾಲಯ ಕಪ್ಪು ಹಣದ ಕೇಂದ್ರಗಳು : ನಿಡುಮಾಮಿಡಿ ಶ್ರೀ

ರಾಯಚೂರು : ಮನುಷ್ಯನನ್ನು ನೀತಿವಂತನನ್ನಾಗಿ ರೂಪಿಸಬೇಕಿದ್ದ ಧಾರ್ಮಿಕ ಸಂಸ್ಥೆಗಳು ದಾರಿ ತಪ್ಪಿಸುವ ವೇದಿಕೆಯಾಗಿವೆ ಎಂದು ಮಾನವ ಧರ್ಮ ಪೀಠದ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.

ಅವರು ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ದಶಕದ ನೆನಪು ಎಂಬ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಧಾರ್ಮಿಕ ಕೇಂದ್ರಗಳು ಮೋಸ ವಂಚನೆಗಳಿಗೆ ರಹದಾರಿ ನೀಡಿ ಹೊಸ ಮಾರ್ಗಗಳ ಮೂಲಕ ಭಕ್ತರನ್ನು ವಂಚಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಠ , ದೇವಸ್ಥಾನಗಳೇ ಕಪ್ಪು ಹಣ ಸಂಗ್ರಹಿಸುವ ಕೇಂದ್ರಗಳಾಗಿ ಪರಿವರ್ತಿತವಾಗಿವೆ. ಸಾಮಾಜಿಕ ವ್ಯವಸ್ಥೆ ಹದಗೆಟ್ಟು ಮಾನವೀಯ ಮೌಲ್ಯದ ಅಧೋಗತಿಗಳಿಯುತ್ತಿದೆ ಎಂದ ಅವರು ಜಗತ್ತಿನ ಇತಿಹಾಸದಲ್ಲಿ ರೈತರು ಕೈ ಸುಟ್ಟುಕೊಂಡು, ಸೋತು ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು. ಇದು ಜಾಗತೀಕರಣದಿಂದ ದುಷ್ಪರಿಣಾಮಗಳನ್ನು ಬಿಂಬಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಮಾರಂಭದಲ್ಲಿ ಸ್ವಾಮೀಜಿಗಳು, ಎನ್‌.ಬಿ. ಲಕ್ಷ್ಮೀ ರೆಡ್ಡಿ ಅವರ ಆತ್ಮಲಿಂಗೇಶ್ವರ ವಚನಗಳು ಮತ್ತು ರಾಘವೇಂದ್ರ ದಂಡಿನ ಅವರ ನಕ್ಷತ್ರಗಳು ಕೃತಿಯನ್ನು ಬಿಡುಗಡೆ ಮಾಡಿದರು. ದೇವೇಂದ್ರ ಕುಮಾರ ಹಕಾರಿ ಕಾರ್ಯಕ್ರಮ ಉದ್ಘಾಟಿಸಿದರು. ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಚೆನ್ನಣ್ಣ ವಾಲೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+