ಹತ್ತಿ ಬೀಜ ಬಿತ್ತಿ ಸಾಲ ಬೆಳೆದು ಪಾಷಾಣವುಂಡ ಕೊಪ್ಪಳದ ರೈತ
ಕೊಪ್ಪಳ : ಭತ್ತದ ಬೆಳೆ ಕೈ ಹತ್ತದೆ ಪಾಷಾಣವುಂಡ ಉತ್ತರ ಕರ್ನಾಟಕದ ರೈತರ ದುರಂತದ ಘಟನೆಗಳು ಕಣ್ಣ ಮುಂದೆ ಹಸಿಯಿರುವಾಗಲೇ, ಹತ್ತಿ ಬೀಜ ಬಿತ್ತಿ ತಳಿ ಬೆಳೆಯಲು ಹೋಗಿ ಸಾಲವನ್ನು ಬೆಳೆದ ಚೆನ್ನಬಸಪ್ಪ ಹೂಗಾರ ಎನ್ನುವ ಜಿಲ್ಲೆಯ ಚುಕ್ಕನಕಲ್ ಗ್ರಾಮದ ರೈತ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾವೇರಿ ಕಂಪನಿಯ ಹತ್ತಿಯ ಬೀಜಗಳೊಂದಿಗೆ ಚೆನ್ನಬಸಪ್ಪ ಹೊಸ ಕನಸುಗಳನ್ನೂ ಕಪ್ಪನೆಯ ಮಣ್ಣಿನಲ್ಲಿ ಬಿತ್ತಿದ್ದ. ಬೆಳೆಯ ರಕ್ಷಣೆಗೆ ಬೆವರಿನೊಂದಿಗೆ ಖರ್ಚಾಗಿದ್ದು 40 ಸಾವಿರ ರುಪಾಯಿ. ಆದರೆ, ಚೆನ್ನಬಸಪ್ಪ ತಂದಿದ್ದ ಬೀಜದಲ್ಲಿ ಯಡವಟ್ಟು ಸಂಭವಿಸಿತ್ತು . ಹೆಣ್ಣು ಬೀಜ ಮಾತ್ರ ಕೊಟ್ಟಿದ್ದ ಕಾವೇರಿ ಕಂಪನಿಯವರು ಗಂಡು ಬೀಜ ಕೊಡುವುದನ್ನು ಮರೆತಿದ್ದರು. ಹೀಗಾಗಿ ಬೆಳೆ ನಿರುಪಯುಕ್ತವಾಯಿತು. ಸಾಲ ತಲೆ ಹತ್ತಿತು.
ಚೆನ್ನಬಸಪ್ಪನ ದೂರನ್ನಾಧರಿಸಿ ಗ್ರಾಮಕ್ಕೆ ಆಗಮಿಸಿದ ಕಂಪನಿಯ ಅಧಿಕಾರಿಗಳು, ಯಥಾಪ್ರಕಾರ ಪ್ರಮಾದಕ್ಕೆ ವಿಷಾದ ವ್ಯಕ್ತ ಪಡಿಸಿದರು. ಪರಿಹಾರವಾಗಿ 15 ಸಾವಿರ ರು. ಮೊತ್ತ ಕಟ್ಟಿಕೊಡಲು ಮುಂದಾದರು. ಆದರೆ, ಈ ಪರಿಹಾರ ಸಾಲವನ್ನು ಹಗುರ ಮಾಡುವಷ್ಟಿರಲಿಲ್ಲ . ಕಣ್ಣ ಮುಂದೆ ಕುಣಿಯುತ್ತಿದ್ದ ಸಾಲದ ಭೂತಕ್ಕೆ ಬೆಚ್ಚಿದ ಚೆನ್ನಬಸಪ್ಪ ಕೊನೆಗೆ ಶರಣಾದದ್ದು ಆತ್ಮಹತ್ಯೆಗೆ.
ಶನಿವಾರ ರಾತ್ರಿ ಬೆಳೆಗೆ ನೀರು ಹಾಯಿಸುತ್ತೇನೆಂದು ಹೋದವನು ಕ್ರಿಮಿ ನಾಶಕವುಂಡ. ಭಾನುವಾರ ಬೆಳಿಗ್ಗೆ ಹೊಲಕ್ಕೆ ಹೋದ ಕುಟುಂಬದವರು ಕಂಡದ್ದು ಆಗಲೋ ಈಗಲೋ ಅನ್ನುವಂತಿದ್ದ ಚೆನ್ನಬಸಪ್ಪನನ್ನು . ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಹೊತ್ತಿಗೆ ಆತ ಸಾವಿನೂರಿಗೆ ಬಹುದೂರ ನಡೆದಿದ್ದ . ಅಲ್ಲಿಗೆ ಬೆಳೆ ಹಾನಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಯಾದಿಗೆ ಮತ್ತೊಬ್ಬ ದುರ್ದೈವಿಯ ಸೇರ್ಪಡೆಯಾಯಿತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications