ನಮ್ಮಲ್ಲಿ ಬನ್ನಿ - ಕೈಗಾರಿಕೋದ್ಯಮಿಗಳಿಗೆ ಪನಾಮಉಪಾಧ್ಯಕ್ಷರ ಆಹ್ವಾನ
ಬೆಂಗಳೂರು : ಬೆಂಗಳೂರು ಭೆಟ್ಟಿ ತುಂಬಾ ಅಪರೂಪದ್ದು ಹಾಗೂ ಸ್ಮರಣೀಯವಾದದ್ದು ಎಂದು ಪನಾಮಾದ ಪ್ರಥಮ ಉಪಾಧ್ಯಕ್ಷ ಡಾ. ಅರ್ತುರೊ ವಲ್ಲಾರಿನೊ ಹೇಳಿದ್ದಾರೆ. ಎರಡು ದಿನಗಳ ಬೆಂಗಳೂರು ಭೇಟಿಗಾಗಿ ಭಾನುವಾರ ಸಂಜೆ ಅವರು ನಗರಕ್ಕೆ ಆಗಮಿಸಿದ್ದರು.
ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ಪಾರ್ಕ್ಗೆ ಸೋಮವಾರ ಭೇಟಿ ನೀಡಿದ ನಂತರ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ವಲ್ಲಾರಿನೊ ರಾಜ್ಯ ಭೇಟಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಭಾರತ ಭೇಟಿ ಫಲಪ್ರದವಾಗಿದೆ. ಈ ಭೇಟಿಯಿಂದಾಗಿ ಹೆಚ್ಚೆಚ್ಚು ವಾಣಿಜ್ಯ ಹಾಗೂ ವಿದೇಶಾಂಗ ಒಡಂಬಡಿಕೆಗಳು ಸಾಧ್ಯವಾಗಿವೆ. ವ್ಯಾಪಾರ ಮಾತ್ರವಲ್ಲದೆ ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ , ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ಭಾರತದೊಂದಿಗೆ ಪನಾಮ ಕೊಡು ಕೊಳ್ಳುವಿಕೆ ಸಂಬಂಧ ಹೊಂದಲಿದೆ ಎಂದರು.
ಪನಾಮದಲ್ಲಿ ನೆಲೆಸಿರುವ ಭಾರತೀಯರು, ಪನಾಮದ ಕೈಗಾರಿಕೆ- ವಾಣಿಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದ ವಲ್ಲಾರಿನೊ, ಹಾಂಕಾಂಗ್ ನಂತರ ವಿಶ್ವದ ಎರಡನೇ ಅತಿ ದೊಡ್ಡ ಕೊಲನ್ ಫ್ರೀ ವಾಣಿಜ್ಯ ವಲಯವೆನಿಸಿದ ಪನಾಮದಲ್ಲಿ ತಮ್ಮ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತೆ ಭಾರತೀಯ ಬಂಡವಾಳಗಾರರಿಗೆ ಕರೆ ನೀಡಿದರು. ಪನಾಮ ಅಧ್ಯಕ್ಷರೊಂದಿಗೆ ಹಾಜರಿದ್ದ ಭಾರೀ ಕೈಗಾರಿಕೆಗಳ ಸಚಿವ ಆರ್.ವಿ. ದೇಶಪಾಂಡೆ, ರಾಜ್ಯದಲ್ಲಿನ ಕೈಗಾರಿಕಾ ಪರಿಸರವನ್ನು ಉಪಯೋಗಿಸಿಕೊಳ್ಳುವಂತೆ ಪನಾಮ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications