ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಯಾವುದೋ ಮುಖ್ಯ ವಿಷಯದ ನಿರೀಕ್ಷೆಯಲ್ಲಿ ನೀವಿದ್ದೀರಿ. ಅದು ತಂತಾನೇ ಬರೋದಿಲ್ಲ. ಜಡ್ಡುಗಟ್ಟಿರುವ ನಿಮ್ಮ ಮಿದುಳಿಗಿಷ್ಟು ಕಸರತ್ತು ಕೊಡಿ. ಆಗ ಆಕಾಶ ಕೈತುಂಬೀತು.ವೃಷಭ : ಆಶಾವಾದಿಗಳಾಗಿ. ಒಂದಿಷ್ಟು ಯೋಚಿಸಿ ಹಣ ಹೂಡಿ. ನೀವು ಬಿಸಿನೆಸ್ ಮ್ಯಾಗ್ನೆಟ್ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ.
ಮಿಥುನ : ಒಲಿದು ಬರುವ ಅದೃಷ್ಟವನ್ನ ನೀವೇ ತಳ್ಳಿ ಬಿಡುತ್ತೀರಿ. ಈ ದಿನ ನಿಮ್ಮ ಎಲ್ಲಾ ಹೆಜ್ಜೆಗಳೂ ಅತಿ ಎನಿಸಿಬಿಡುತ್ತವೆ. ಅದೇ ನಿಮಗೆ ಕಂಠಕವೂ ಹೌದು.
ಕಟಕ : ಹೇಳುವ ಎಲ್ಲದರಲ್ಲೂ ಉತ್ಪ್ರೇಕ್ಷೆ ಗರಿಗೆದರಿಬಿಡುತ್ತದೆ. ಅದು ಇದಿರು ಪಾರ್ಟಿಗೆ ಖಂಡಿತ ಅರ್ಥವಾಗುತ್ತದೆ. ನಿಮ್ಮ ಈ ವರ್ತನೆಯೇ ವ್ಯಾಪಾರದ ದೊಡ್ಡ ಎಡರು.
ಸಿಂಹ : ಕಾಂಕ್ಷೆಯ ಮೇಲಿಷ್ಟು ಕಡಿವಾಣವಿರಲಿ. ಭಾವನೆಗಳನ್ನು ಒಮ್ಮೆಲೇ ಹರಿಬಿಡಬೇಡಿ. ಬೇರೆಯವರ ದೃಷ್ಟಿಯಲ್ಲಿ ಅದು ಪ್ರವಾಹವಾದೀತು.
ಕನ್ಯಾ : ವಾರೆ ವಾ! ನಿಮ್ಮ ಕೆರಿಯರಲ್ಲಿ ಇವತ್ತು ಒಮ್ಮೆಲೇ ಹತ್ತು ಮೆಟ್ಟಿಲೇರುತ್ತೀರಿ. ವಿದೇಶಕ್ಕೆ ಹಾರೋ ಭಾಗ್ಯ ಬರುವ ಲಕ್ಷಣಗಳೂ ಇವೆ.
ತುಲಾ : ಗೆಲುವಿನ ಹಾದಿ ಕೆದಕಲು ಸೋಲೇ ಪ್ರೇರಕ. ಇವತ್ತು ಕಳಕೊಳ್ಳುವ ಹತ್ತು ರುಪಾಯಿ ಬದಲಿಗೆ ನಾಳೆ ನೂರರ ಒಡೆಯ ನೀವಾಗುವಿರಿ.
ವೃಶ್ಚಿಕ : ನಿಮ್ಮ ರುಟೀನಿನ ಟಾಕುಟೀಕು ಬಿಟ್ಟು ಮನೆಮಂದಿಯ ತಾಳಕ್ಕೆ ಹೆಜ್ಜೆ ಹಾಕುವ ದಿನವಿದು. ಎಲ್ಲಾ ವಿಷಯಗಳಲ್ಲೂ ಒಂದು ಅರ್ಥಪೂರ್ಣ ದಿನ.
ಧನಸ್ಸು : ನಿಂತಲ್ಲೇ ನಿಲ್ಲೋ ನೀರಾಗಬೇಡಿ. ಹೊಳೆಯಾಗಿ ಕೊಳೆ ತೊಳೆಯಲು ಕಟ್ಟೆ ಒಡೆದುಕೊಂಡು ಹೊರಚಿಮ್ಮಿ. ಹರಿವ ಬಗಲುಗಳೆಲ್ಲಾ ಹಸುರ ಬಯಲು.
ಮಕರ : ನಿಶ್ಚೇಷ್ಟತೆ ಕಳೆದು ಒಲವು, ಲಲ್ಲೆ, ಪ್ರೀತಿ ಮಾತುಗಳ ಹರಿಸುವ ನೀವು ಸಂಗಾತಿಯ ಮುಖದಲ್ಲಿ ಸಾರ್ಥಕತೆಯ ನಗು ಮೂಡಿಸುವಲ್ಲಿ ಯಶಸ್ವಿಯಾಗುವಿರಿ.
ಕುಂಭ : ಸಂಸಾರ ಸುಖಕ್ಕೆ ಒಂದಿಷ್ಟು ಪೆಟ್ಟು ಬಿದ್ದಿದೆ. ಮನೆಯ ವಾಸ್ತು ಸರಿಯಿಲ್ಲವೆಂಬ ಕೊರಗು ಮನ ಕೊರೆಯುತ್ತಿದೆ. ಗೊಂದಲಗಳಿಗೆಲ್ಲಾ ಉತ್ತರ ಕಂಡುಕೊಂಡು, ನೆಮ್ಮದಿ ತುಂಬಿಕೊಳ್ಳಿ.
ಮೀನ : ಹರುಷದ ಕೂಳು ನೆಚ್ಚಿಕೊಂಡು ವರ್ಷದ ಕೂಳಿಗೆ ಕುತ್ತು ತಂದುಕೊಂಡೀರಿ. ಯಾವುದೇ ತೀರ್ಮಾನ ಕೈಗೊಳ್ಳುವಾಗ 5 ನಿಮಿಷ ತಡೆದು, ಮುನ್ನುಗ್ಗಿ. ಇಲ್ಲವಾದಲ್ಲಿ ಎಡವೋ ಕಾಲೇ ಮತ್ತೆ ಮತ್ತೆ ಮುಗ್ಗರಿಕೆ ಒಡ್ಡುವುದು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications