ಗುಜರಾತ್ ಭೂಕಂಪ : ಇಂಡಿ ಎಂಜಿನಿಯರ್ ಸಾವು, ಒಬ್ಬ ನಾಪತ್ತೆ
ಬೆಂಗಳೂರು : ಗಣರಾಜ್ಯೋತ್ಸವದ ದಿನ ಗುಜರಾತ್ನಲ್ಲಿ ಸಂಭವಿಸಿದ ಭೀಭತ್ಸ ಭೂಕಂಪದಲ್ಲಿ ಇಂಡಿ ತಾಲೂಕಿನ ಚಿಕ್ಕ ಬೇವನೂರಿನ ಯುವ ಎಂಜಿನಿಯರ್ರೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ.
ಚಿಕ್ಕ ಬೇವನೂರಿನ ಬಾಬು ಉಮರ್ಜಿ (23) ಕಳೆದ ಐದು ವರ್ಷಗಳಿಂದಲೂ ಗುಜರಾತ್ ಗಾಂಧೀನಗರದಲ್ಲಿ ಕಂಪ್ಯೂಟರ್ ಎಂಜಿನಿಯರ್ ಆಗಿ ಸೇವೆಸಲ್ಲಿಸುತ್ತಿದ್ದರು. ಭೀಕರ ಭೂಕಂಪದಿಂದ ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಕ್ಕಿ ಅವರು ಸಾವನ್ನಪ್ಪಿದ್ದಾರೆ ಎಂದು ಈಗ ವರದಿಯಾಗಿದೆ.
ಇವರೊಂದಿಗೆ ಗುಜರಾತ್ನಲ್ಲಿದ್ದ ಮಹೇಶ ಎಂಬುವವರು ಇನ್ನೂ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಅವರ ಕುಟುಂಬದವರಿಗೆ ಈವರೆಗೆ ಯಾವುದೇ ಮಾಹಿತಿ ದೊರಕಿಲ್ಲ ಎಂದು ಗೊತ್ತಾಗಿದೆ. ಈ ಮಧ್ಯೆ ಚಂದ್ರಶೇಖರ್, ಅಪ್ಪಾಜಿ ಗೌಡ ಹಾಗೂ ಗೋಪಾಲಕೃಷ್ಣ ಎಂಬ ಮೂರು ಕನ್ನಡ ಕುಟುಂಬಗಳು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿವೆ ಎಂದು ವರದಿಗಳು ತಿಳಿಸಿವೆ.
ಆರು ತಿಂಗಳ ಹಿಂದಷ್ಟೇ ಗುಜರಾತಿನ ಭುಜ್ ಬಳಿಯ ಗಾಂಧೀಧಾಮ್ಗೆ ಹೋಗಿ ನೆಲೆಸಿದ್ದ ವಾಣಿ ಹಾಗೂ ಆಕೆಯ 8 ವರ್ಷದ ಪುತ್ರಿ ದೀಪ್ತಿ ಅವರು ಮೃತ್ಯು ದವಡೆಯಿಂದ ಬದುಕುಳಿದು ಮರಳಿದ್ದಾರೆ. ವಾಣಿ ಅವರು, ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಅವರ ಪುತ್ರಿ. ಭೂಕಂಪ ಸಂಭವಿಸಿದಾಗ ವಾಣಿ ಅವರ ಪತಿ ಜೋಷಿ ಊರಿನಲ್ಲಿರಲಿಲ್ಲ. ಈಗ ಮೂವರೂ ಸುರಕ್ಷಿತವಾಗಿ ಧಾರವಾಡಕ್ಕೆ ವಾಪಸಾಗಿದ್ದಾರೆ.
ಮೂಲತಃ ಕೋಲಾರದವರಾದ ಸಿ.ಎನ್. ವರದರಾಜು, ರಾಜು ಅವರ ಪತ್ನಿ ಗಿರಿಜಾ ಹಾಗೂ ಮಕ್ಕಳಾದ ಸಂಜನಾ ಮತ್ತು ವರುಣ್ ಭೂಕಂಪದಲ್ಲಿ ಪುನರ್ಜನ್ಮ ಪಡೆದು ತವರೂರಿಗೆ ಮರಳಿದ್ದಾರೆ. ವರದರಾಜು ಅವರು, ಅಹ್ಮದಾಬಾದ್ನ ಅಂಬಾವಾಡಿಯ ವಿಜಯಾಬ್ಯಾಂಕ್ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಮೊಗ್ಗದ ವಿನೋಬ ಬಡಾವಣೆ ನಿವಾಸಿ ಕೆ. ರಾಘವನ್ ಕಾರ್ಪೊರೇಷನ್ ಬ್ಯಾಂಕ್ ಅಧಿಕಾರಿ ಇವರು ಅಹ್ಮದಾಬಾದ್ನ ನವರಂಗ್ಪುರ್ ವಲಯ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸಾವಿರಾರು ಜನರನ್ನು ಬಲಿತೆಗೆದುಕೊಂಡ ಭೂಕಂಪದ ಕೆನ್ನಾಲಿಗೆಯಿಂದ ತಪ್ಪಸಿಕೊಂಡು ಸುರಕ್ಷಿತವಾಗಿ ತವರಿಗೆ ಮರಳಿದ ಅದೃಷ್ಟವಂತರಲ್ಲಿ ಇವರ ಕುಟುಂಬವೂ ಒಂದು.
ಪತ್ನಿ ಅನಸೂಯ, 9 ವರ್ಷದ ಮಗ ಧನುಷ್ ಅವರೊಂದಿಗೆ ಈಗ ಶಿವಮೊಗ್ಗಕ್ಕೆ ಬಂದಿದ್ದಾರೆ. ಸುರಕ್ಷಿತವಾಗಿ ಮರಳಿರುವ ಈ ಎಲ್ಲ ಕನ್ನಡಿಗರ ಕುಟುಂಬಗಳ ಅನುಭವವೂ ಕರುಳು ಹಿಂಡುವಂತಿವೆ. ಕಣ್ಣಾರೆ ಸಾವಿರಾರು ಜನರ ಸಾವನ್ನು ಕಂಡ ಇವರ್ಯಾರೂ ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications