ರಾಜ್ಯದಿಂದ ಗುಜರಾತ್ಗೆ ಬಹುದಿನ ಕೆಡದ ಆಹಾರ ಪೊಟ್ಟಣ
ಮೈಸೂರಿನ ಸಿ.ಎಫ್.ಟಿ. ಆರ್.ಐ. ಬಹಳ ದಿನಗಳ ಕಾಲ ಕೆಡದೆ ಉಳಿಯುವ ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿ, ಗುಜರಾತ್ ಸಂತ್ರಸ್ತರ ಶಿಬಿರಗಳಿಗೆ ಕಳುಹಿಸುತ್ತಿದೆ. ಪ್ರಥಮ ಹಂತದಲ್ಲಿ ಸುಮಾರು 2500 ಆಹಾರ ಪೊಟ್ಟಣಗಳನ್ನು ಕಳುಹಿಸುತ್ತಿರುವುದಾಗಿ ಸಿಎಫ್ಟಿಆರ್ಐನ ವಿ. ಪ್ರಕಾಶ್ ತಿಳಿಸಿದ್ದಾರೆ.
- ಸುಡುವ ಬಿಸಿಲಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರು ಹಲವು ಗಣ್ಯರ ಜತೆಗೂಡಿ ಜಾತ್ಯತೀತ ಜನತಾದಳ ಕೇಂದ್ರ ಕಚೇರಿಯಿಂದ ಪಾದಯಾತ್ರೆ ನಡೆಸಿ ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಿದರು. ಜನ ಮುಗಿಬಿದ್ದು, ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ನೆರವು ನೀಡಿದರು.
- ಶುಕ್ರವಾರದ ಈ ಪಾದಯಾತ್ರೆಯಲ್ಲಿ 4.48ಲಕ್ಷ ರುಪಾಯಿ ನಗದು, 10 ಲಕ್ಷ ರುಪಾಯಿ ಮೌಲ್ಯದ, ಬಟ್ಟೆ, ಆಹಾರ ಪದಾರ್ಥ ಹಾಗೂ ಚೆಕ್ ಸಂಗ್ರಹವಾಗಿದೆ. ಶನಿವಾರವೂ ಪಾದಯಾತ್ರೆ ಮುಂದುವರಿಯಲಿದೆ.
- ಸಂತ್ರಸ್ತ್ರರ ನೆರವಿಗಾಗಿ ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ 25 ಲಕ್ಷ ರುಪಾಯಿಗಳ ಪರಿಹಾರ ಕಳುಹಿಸಿಕೊಡುವುದಾಗಿ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷರೂ ಆದ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಅವರು ಬೆಳಾವಿಯಲ್ಲಿ ಪ್ರಕಟಿಸಿದ್ದಾರೆ.
- ವಿವಾದಾತ್ಮಕ ಹೇಳಿಕೆ ನೀಡಿ, ರಾಜೀನಾಮೆ ನೀಡಿರುವ ಮಾಜಿ ಸಚಿವ ಟಿ. ಜಾನ್ ಅವರು ಶನಿವಾರದಿಂದಲೇ ಪಾದಯಾತ್ರೆ ಮಾಡಿ ನಿಧಿ ಸಂಗ್ರಹಿಸುವುದಾಗಿ ಹೇಳಿದ್ದಾರೆ.
- ಜವಳಿ ಖಾತೆಯ ನೌಕರರು ತಮ್ಮ ಒಂದು ದಿನದ ಸಂಬಳವಾದ ಸುಮಾರು ಒಂದು ಕೋಟಿ ರುಪಾಯಿಗಳನ್ನು ಗುಜರಾತ್ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
- ಭಾರತೀಯ ಕ್ರೆೃಸ್ತರ ಜಾಗತಿಕ ಸಮಿತಿ 5 ಲಕ್ಷ ರುಪಾಯಿ ಮೌಲ್ಯದ ಔಷಧಿ ಹಾಗೂ 2 ಕೋಟಿ ರುಪಾಯಿ ಮೌಲ್ಯದ ಆಹಾರ ಪೊಟ್ಟಣಗಳನ್ನು ಗುಜರಾತ್ಗೆ ಕಳುಹಿಸಿಕೊಡುವುದಾಗಿ ತಿಳಿಸಿದೆ.
- ಅಹಮದಾಬಾದ್ ಸಮೀಪದ ಗಾಂಧೀಧಾಮ್ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಇಂಡಿಯಾ ಕ್ಯಾಂಪಸ್ ಕ್ರುಸೆಡ್ ಫಾರ್ ಕ್ರಿಶ್ಚಿಯನ್ನ ಸಹಯೋಗದಲ್ಲಿ ಒಂದು ಸಾವಿರ ಮನೆ ನಿರ್ಮಿಸಲು, ಮನೆಯಾಂದಕ್ಕೆ 65 ಸಾವಿರ ರುಪಾಯಿ ನೆರವು ನೀಡಲೂ ಕ್ರೆೃಸ್ತರ ಜಾಗತಿಕ ಸಮಿತಿ ಪ್ರಕಟಿಸಿದೆ.
| ಮುಖಪುಟ |
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications