ಸಾಂಕ್ರಾಮಿಕ ರೋಗ ಕರೆದೀರಿ- ಕೇಶುಭಾಯ್ ಎಚ್ಚರಿಕೆ
ಅಂಜಾರ್ : ಅವಶೇಷಗಳಡಿ ತಮ್ಮ ಜನ ಇನ್ನೂ ಬದುಕಿರಬಹುದೆಂಬ ನಂಬುಗೆಯಲ್ಲಿ ಗುಜರಾತ್ ಜನ ದೊಡ್ಡ ಯಂತ್ರಗಳನ್ನು ತಂದು ಹೆಣಗಳನ್ನು ಎತ್ತಲು ಒಪ್ಪುತ್ತಿಲ್ಲ. ಜನರ ಈ ಧೋರಣೆ ಇನ್ನಷ್ಟು ಜನರ ಸಾವಿಗೆ ಕಾರಣವಾದೀತು ಎಂದು ಗುಜರಾತ್ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಶುಕ್ರವಾರ ಎಚ್ಚರಿಸಿದ್ದಾರೆ.
ಆರು ದಿನ ಕಳೆದಿವೆ. ಇನ್ನು ಯಾವುದೇ ಪವಾಡ ಸಾಧ್ಯವಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಜೀವ ಉಳಿದಿದ್ದರೂ, ಅವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೊಳೆತು ನಾರುತ್ತಿರುವ ಹೆಣಗಳನ್ನು ಹೊರತೆಗೆಯದೆ ಇರಲಾಗದು. ಇನ್ನಷ್ಟು ದಿನ ತಡೆದಲ್ಲಿ ಸಾಂಕ್ರಾಮಿಕ ರೋಗ ಕಣಗಳು ಗಾಳಿಯ ಪ್ರತಿ ಕಣದಲ್ಲಿ ಸೇರಿ ಹೋಗುವ ಆತಂಕವಿದೆ. ಜನ ಇದನ್ನು ಮನಗಂಡು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಪಟೇಲ್ ಮನವಿ ಮಾಡಿದ್ದಾರೆ.
ಈವರೆಗೆ ಸುಮಾರು 35 ಸಾವಿರ ಮಂದಿ ಸತ್ತಿರುವುದು ಬೆಳಕಿಗೆ ಬಂದಿದೆ. ಒಟ್ಟು 15 ಸಾವಿರ ಕೋಟಿ ರುಪಾಯಿ ಆಸ್ತಿ- ಪಾಸ್ತಿ ಹಾಳಾಗಿದೆ. ಇನ್ನು ನಾವು ಬದುಕುಳಿದಿರುವ ಜನರ ಹಿತರಕ್ಷಣೆಗೆ ಗಮನ ಹರಿಸಬೇಕಾಗಿದೆ. ಅವಶೇಷಗಳಿಗೆಲ್ಲಾ ಸಾಂಕ್ರಾಮಿಕ ರೋಗ ನಿವಾರಕಗಳನ್ನು ಸಿಂಪಡಿಸಲಾಗುವುದು. ಉಪಯೋಗಿಸುವ ನೀರಿಗೆ ಸಾಕಷ್ಟು ಕ್ಲೋರಿನ್ ಸೇರಿಸಲಾಗುವುದು ಎಂದರು.
ಕೇಂದ್ರ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರೊಂದಿಗೆ ಕಛ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಪಟೇಲ್, ಹಣ ಕಾಸು ಕಳಕೊಂಡಿರುವ ಸಂತ್ರಸ್ತರಿಗೆ ದಿನಕ್ಕೆ 10 ರುಪಾಯಿಯಂತೆ ಕೊಡುತ್ತಿರುವ ನೆರವನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಗಾಂಧಿಧಾಮ ಮತ್ತು ಆದಿಪುರದ ಸಂತ್ರಸ್ತರಿಗೆ ಒಂದು ಲಕ್ಷ ಗೃಹೋಪಯೋಗಿ ಕಿಟ್ಗಳು ಹಾಗೂ ದವಸ ಧಾನ್ಯಗಳನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿತರಿಸಲಾಯಿತು.
(ಪಿಟಿಐ)
| ಮುಖಪುಟ |
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications