ಜಯನಗರ ಬಳಿ ಉದ್ಯಮಿಯಿಂದ 14 ಲಕ್ಷ ರು. ಲೂಟಿ
ಬೆಂಗಳೂರು : ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯಾಬ್ಬರನ್ನು ಮತ್ತೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ 14 ಲಕ್ಷ ರೂಪಾಯಿ ದೋಚಿರುವ ಘಟನೆ ಜಯನಗರ ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಎಡೆಯೂರು ಕೆರೆ ಬಳಿಯ ಸಗಟು ವ್ಯಾಪಾರಿ ಶ್ರೀನಿವಾಸ ಬುಧವಾರ ರಾತ್ರಿ 9 ಗಂಟೆ ಹತ್ತಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದುಷ್ಕರ್ಮಿಗಳು ನಗದು ಇದ್ದ ಚೀಲವನ್ನು ಎತ್ತಿಕೊಂಡು ಓಡುತ್ತಿದ್ದ ಸಂದರ್ಭದಲ್ಲಿ , ಶ್ರೀನಿವಾಸ್ ತಮ್ಮ ಕಾರನ್ನು ಚಾಲನೆ ಮಾಡಿ ದುಷ್ಕರ್ಮಿಯಾಬ್ಬನಿಗೆ ಡಿಕ್ಕಿ ಹೊಡೆದಾಗ ಸಾರ್ವಜನಿಕರು ಆತನಿಗೆ ಹಿಗ್ಗಾ ಮುಗ್ಗಾ ಹೊಡೆದು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ಕನ್ನಗಳ್ಳರ ಬಂಧನ : ಕನ್ನಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜೆ.ಪಿ. ನಗರದ ಪೊಲೀಸರು ಬಂಧಿಸಿದ್ದು, 50 ಸಾವಿರ ರೂಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿ.ಜೆ. ಹಳ್ಳಿ ನಿವಾಸಿ ಸೈಯ್ಯದ್ ಪೈಯಾಜ್(24) ಹಾಗೂ ಟ್ಯಾನರಿ ರಸ್ತೆ ನಿವಾಸಿ ಸೈಯ್ಯದ್ ಖಾನ್ ಬಂದಿತರು.
(ಇನ್ಫೋ ವಾರ್ತೆ)