ಸ್ವರ್ಣ ಚತುಷ್ಕೋಣ ಹೆದ್ದಾರಿಯಲ್ಲಿ ರಾಜ್ಯದ 750 ಕಿ.ಮೀ ರಸ್ತೆ
ಬೆಂಗ-ಳೂ-ರು : ಪ್ರಧಾ-ನ ಮಂತ್ರಿ-ಗ-ಳ ಸ್ವರ್ಣ ಚತು-ಷ್ಕೋ-ಣ ಹೆದ್ದಾ-ರಿ ನಿರ್ಮಾ-ಣ ಯೋಜ-ನೆ-ಯ-ಲ್ಲಿ ರಾಜ್ಯ-ದ 750 ಕಿ.ಮೀಟ-ರ್ ಉದ್ದ-ದ ರಸ್ತೆ-ಯ-ನ್ನು ಸಹ ಸೇರಿ-ಸ-ಲಾ-ಗಿ-ದೆ. ಈ ವಿಷ-ಯ-ವ-ನ್ನು ಮಂಗ-ಳ-ವಾ-ರ ಬೆಂಗ-ಳೂ-ರಿ-ನ-ಲ್ಲಿ ಲೋ-ಕೋ-ಪ-ಯೋ-ಗಿ ಸಚಿ-ವ ಧರ್ಮ ಸಿಂಗ್ ಅವ-ರು ತಿಳಿ-ಸಿ-ದ-ರು.
ಈ ಎರ-ಡು ಹೆದ್ದಾ-ರಿ-ಗ-ಳ ಜತೆ 11 ಬೈಪಾ-ಸ್ ರಸ್ತೆ-ಗ-ಳೂ ಸೇರ್ಪ-ಡೆ-ಯಾ-ಗಿ-ವೆ ಎಂದ-ರು. ಮುಂಬಯಿಯಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವಲ್ಲಿ ರಾಜ್ಯದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ ನಾಲ್ಕರ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 7ರ ರಸ್ತೆಗಳು ಈ ಯೋಜನೆಯಲ್ಲಿ ಸೇರಿವೆ. ಈ ರಸ್ತೆ-ಗ-ಳ ಕಾಮ-ಗಾ-ರಿ ಸಹ ಉತ್ತ-ಮ ಗುಣ-ಮ-ಟ್ಟ-ದಿಂ-ದ ಕೂಡಿ-ರು-ತ್ತ-ದೆ ಎಂದು ಸಚಿ-ವ-ರು ತಿಳಿ-ಸಿ-ದ-ರು. ಈ ರಸ್ತೆಗಳನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಯೋಜ-ನೆ-ಗೆ ಒಟ್ಟು 5800 ಕೋಟಿ ರುಪಾ-ಯಿ-ಗ-ಳ ವೆಚ್ಚ ಆಗ-ಲಿ-ದ್ದು, ರಾಜ್ಯ-ದ ಎರ-ಡು ಹೆದ್ದಾ-ರಿ-ಗ-ಳ ಅಭಿ-ವೃ-ದ್ಧಿ-ಗೆ 3200 ಕೋಟಿ ರುಪಾ-ಯಿ ವೆಚ್ಚ ತಗು-ಲ--ಲಿ-ದೆ ಎಂದೂ ಹೇಳಿ-ದ-ರು.
ವಿಶ್ವಬ್ಯಾಂಕ್ ನೆರವು : ವಿಶ್ವ ಬ್ಯಾಂಕ್ನಿಂದ 1999 ಕೋಟಿ ರು. ಸಾಲ ಪಡೆದು ರಾಜ್ಯದ 2043 ಕಿ.ಮೀಟರ್ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದೂ ಅವರು ನುಡಿದರು. ರಾಜ್ಯದ ರಸ್ತೆ ಅಭಿವೃದ್ಧಿಗೆ ಸಾಲ ಒದಗಿಸುವ ಸಂಬಂಧ ಯೋಜನೆಯನ್ನು ಖುದ್ದು ಪರಿಶೀಲಿಸಲು ಗೃಹಾಂಗ್ ಚುಂಗ್ ಅವರ ನೇತೃತ್ವದ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ನಾಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಿದೆ ಎಂದೂ ಅವರು ಹೇಳಿದರು.