ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ನಿಮ್ಮಲ್ಲಿರುವ ಬುದ್ಧಿಯನ್ನೆಲ್ಲಾ ಖರ್ಚು ಮಾಡುವಷ್ಟು ಕೆಲಸದ ಒತ್ತಡ ಇದೆ. ಆಪ್ತ ಮಿತ್ರನಿಂದ ಸಹಾಯ. ವ್ಯಾಪಾರದಲ್ಲಿ ನಷ್ಟ ಸಂಭವ.ವೃಷಭ :ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ ನಿಮ್ಮಲ್ಲಿರಬೇಕಷ್ಟೇ. ಮನುಷ್ಯ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಿ.
ಮಿಥುನ : ಎಲ್ಲರಿಗೂ ಅದೇಕೋ ನಿಮ್ಮ ಮೇಲೆ ಕಣ್ಣು. ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನಿಮ್ಮ ಶ್ರದ್ಧೆ ಹಾಗೂ ಒಳ್ಳೆಯ ತನವೇ ನಿಮಗೆ ಯಶಸ್ಸು ತಂದುಕೊಡುತ್ತದೆ.
ಕಟಕ : ಕಷ್ಟಗಳೆಲ್ಲಾ ನಿಮ್ಮೊಬ್ಬರಿಗೆ ಬರುತ್ತದೆ ಎಂದುಕೊಳ್ಳಬೇಡಿ. ಮನುಷ್ಯನಿಗಲ್ಲದೆ ಮರಕ್ಕೆ ಕಷ್ಟ ಬರಲು ಸಾಧ್ಯವೇ? ನಾಳೆ ಉಳಿತಾಗಲಿದೆ ಎಂಬ ನಿರೀಕ್ಷೆ ಇರಬೇಕಷ್ಟೇ.
ಸಿಂಹ : ರಾಮನಿಗೆ ಇಲ್ಲವೆ ರಾವಣನಿಗೆ ರಾಜ್ಯ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಿ. ಯಶಸ್ಸು ಸಿಕ್ಕೇ ಸಿಗುತ್ತದೆ.
ಕನ್ಯಾ : ಮನಸ್ಸಿನ ಕಸಿವಿಸಿಯೆಲ್ಲಾ ಕೊನೆಯಾಗಲಿದೆ. ಸರಕಾರದ ಅಧಿಕಾರಿಗಳಿಂದ ನೆರವು. ಷೇರು ವ್ಯವಹಾರದಲ್ಲಿ ನಷ್ಟ.
ತುಲಾ : ಉಪ್ಪು ಅನ್ನ ತಿಂದರೂ ಮನಸ್ಸಿಗೆ ನೆಮ್ಮದಿ ಮುಖ್ಯ. ನೀವು ಬಯಸುತ್ತಿರುವುದೂ ಅದನ್ನೇ. ಆರೋಗ್ಯದ ಕಡೆ ಗಮನಕೊಡಿ.
ವೃಶ್ಚಿಕ : ಪ್ರಣಯಿಗಳಿಗೆ ಶುಭದಿನ. ದೂರದ ಊರಿಗೆ ಪ್ರಯಾಣ. ವಿಪರೀತ ಖರ್ಚು. ಬಂಧು ಮಿತ್ರರಿಂದ ಕಿರಿಕಿರಿ.
ಧನಸ್ಸು :ಚಿಕ್ಕ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವುದು ಸರಿಯೇ? ಮನೆಯಲ್ಲಿ ಕಲಹ, ಚೋರ ಭಯ, ಶುಭವಾರ್ತೆಯ ನಿರೀಕ್ಷೆ.
ಮಕರ : ಇಂದು ಶುಭದಿನ. ಪ್ರಪಂಚದ ಎಲ್ಲ ಸುಖವೂ ನಿಮ್ಮ ಬಳಿಯೇ ಬಂದಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಿಮ್ಮ ಕೈಲೇ ಇದೆ.
ಕುಂಭ : ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಮುಂದೇನಾಗಬೇಕೆಂದು ನೋಡಿ. ಬಡ್ತಿ ದೊರಕುವ ಕಾಲ. ಎಲ್ಲರೂ ಮೆಚ್ಚುವಂತೆ ನಡೆದುಕೊಳ್ಳಿ.
ಮೀನ : ನೀವು ಇನ್ನು ಅದೃಷ್ಟ ಅರಸಿ ಹೋಗುವ ಅಗತ್ಯ ಇಲ್ಲ. ಇಂದಂತೂ ನಿಮ್ಮನ್ನೇ ಅದೃಷ್ಟ ಹುಡುಕಿಕೊಂಡು ಬರಲಿದೆ. ಲಾಟರಿ ಟಿಕೆಟ್ ಕೊಂಡರೂ ಕೊಳ್ಳಬಹುದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications