ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ನಿಮ್ಮಲ್ಲಿರುವ ಬುದ್ಧಿಯನ್ನೆಲ್ಲಾ ಖರ್ಚು ಮಾಡುವಷ್ಟು ಕೆಲಸದ ಒತ್ತಡ ಇದೆ. ಆಪ್ತ ಮಿತ್ರನಿಂದ ಸಹಾಯ. ವ್ಯಾಪಾರದಲ್ಲಿ ನಷ್ಟ ಸಂಭವ.

ವೃಷಭ :ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ ನಿಮ್ಮಲ್ಲಿರಬೇಕಷ್ಟೇ. ಮನುಷ್ಯ ಪ್ರಯತ್ನಕ್ಕೆ ಹೆಚ್ಚು ಒತ್ತು ನೀಡಿ.

ಮಿಥುನ : ಎಲ್ಲರಿಗೂ ಅದೇಕೋ ನಿಮ್ಮ ಮೇಲೆ ಕಣ್ಣು. ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ನಿಮ್ಮ ಶ್ರದ್ಧೆ ಹಾಗೂ ಒಳ್ಳೆಯ ತನವೇ ನಿಮಗೆ ಯಶಸ್ಸು ತಂದುಕೊಡುತ್ತದೆ.

ಕಟಕ : ಕಷ್ಟಗಳೆಲ್ಲಾ ನಿಮ್ಮೊಬ್ಬರಿಗೆ ಬರುತ್ತದೆ ಎಂದುಕೊಳ್ಳಬೇಡಿ. ಮನುಷ್ಯನಿಗಲ್ಲದೆ ಮರಕ್ಕೆ ಕಷ್ಟ ಬರಲು ಸಾಧ್ಯವೇ? ನಾಳೆ ಉಳಿತಾಗಲಿದೆ ಎಂಬ ನಿರೀಕ್ಷೆ ಇರಬೇಕಷ್ಟೇ.

ಸಿಂಹ : ರಾಮನಿಗೆ ಇಲ್ಲವೆ ರಾವಣನಿಗೆ ರಾಜ್ಯ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮಾಡಿ. ಯಶಸ್ಸು ಸಿಕ್ಕೇ ಸಿಗುತ್ತದೆ.

ಕನ್ಯಾ : ಮನಸ್ಸಿನ ಕಸಿವಿಸಿಯೆಲ್ಲಾ ಕೊನೆಯಾಗಲಿದೆ. ಸರಕಾರದ ಅಧಿಕಾರಿಗಳಿಂದ ನೆರವು. ಷೇರು ವ್ಯವಹಾರದಲ್ಲಿ ನಷ್ಟ.

ತುಲಾ : ಉಪ್ಪು ಅನ್ನ ತಿಂದರೂ ಮನಸ್ಸಿಗೆ ನೆಮ್ಮದಿ ಮುಖ್ಯ. ನೀವು ಬಯಸುತ್ತಿರುವುದೂ ಅದನ್ನೇ. ಆರೋಗ್ಯದ ಕಡೆ ಗಮನಕೊಡಿ.

ವೃಶ್ಚಿಕ : ಪ್ರಣಯಿಗಳಿಗೆ ಶುಭದಿನ. ದೂರದ ಊರಿಗೆ ಪ್ರಯಾಣ. ವಿಪರೀತ ಖರ್ಚು. ಬಂಧು ಮಿತ್ರರಿಂದ ಕಿರಿಕಿರಿ.

ಧನಸ್ಸು :ಚಿಕ್ಕ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವುದು ಸರಿಯೇ? ಮನೆಯಲ್ಲಿ ಕಲಹ, ಚೋರ ಭಯ, ಶುಭವಾರ್ತೆಯ ನಿರೀಕ್ಷೆ.

ಮಕರ : ಇಂದು ಶುಭದಿನ. ಪ್ರಪಂಚದ ಎಲ್ಲ ಸುಖವೂ ನಿಮ್ಮ ಬಳಿಯೇ ಬಂದಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಿಮ್ಮ ಕೈಲೇ ಇದೆ.

ಕುಂಭ : ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಮುಂದೇನಾಗಬೇಕೆಂದು ನೋಡಿ. ಬಡ್ತಿ ದೊರಕುವ ಕಾಲ. ಎಲ್ಲರೂ ಮೆಚ್ಚುವಂತೆ ನಡೆದುಕೊಳ್ಳಿ.

ಮೀನ : ನೀವು ಇನ್ನು ಅದೃಷ್ಟ ಅರಸಿ ಹೋಗುವ ಅಗತ್ಯ ಇಲ್ಲ. ಇಂದಂತೂ ನಿಮ್ಮನ್ನೇ ಅದೃಷ್ಟ ಹುಡುಕಿಕೊಂಡು ಬರಲಿದೆ. ಲಾಟರಿ ಟಿಕೆಟ್‌ ಕೊಂಡರೂ ಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X