ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಭೂಕಂಪ ಕ್ರೆೃಸ್ತರ ಮೇಲಿನದೌರ್ಜನ್ಯದ ಫಲ -ಸಚಿವ ಜಾನ್‌

By Staff
|
Google Oneindia Kannada News

ಬೆಂಗಳೂರು : ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ , ಅಲ್ಲಿ ಕ್ರೆೃಸ್ತರ ಮೇಲೆ ನಡೆದ ಅತೀವ ದೌರ್ಜನ್ಯದ ಫಲ ಎಂದು ರಾಜ್ಯ ವಿಮಾನಯಾನ ಖಾತೆ ಸಚಿವ ಟಿ. ಜಾನ್‌ ಹೇಳಿದ್ದಾರೆ.

ಗುಜರಾತ್‌ನಲ್ಲಿ ಕ್ರಿಶ್ಚಿಯನ್ನರ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸಲಾಯಿತು, ಚರ್ಚ್‌ಗಳನ್ನೂ ಧ್ವಂಸ ಮಾಡಲಾಯಿತು. ಇದರ ಫಲವಾಗಿಯೇ ಆ ರಾಜ್ಯ ಭೀಕರ ಭೂಕಂಪ ಎದುರಿಸಬೇಕಾಯಿತು ಎಂದು ಜಾನ್‌ ಹೇಳಿದ್ದಾರೆ. ಅವರು ಮಂಗಳವಾರ ನಗರದ ಸೈಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಶಾಂತಿ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಗುಜರಾತಿನ ಕ್ರೆೃಸ್ತರು ದೌರ್ಜನ್ಯದಿಂದ ನೊಂದು ಸಲ್ಲಿಸಿದ ಪ್ರಾರ್ಥನೆ ದೇವರನ್ನು ತಲುಪಿದೆ. ಆದ್ದರಿಂದ ಅಲ್ಲಿ ಭೂಕಂಪವಾಗಿ ಸಾವಿರಾರು ಮಂದಿ ಮಣ್ಣು ಪಾಲಾಗಬೇಕಾಯಿತು ಎಂದ ಜಾನ್‌, ಪರಧರ್ಮ ಸಹಿಸದವರು, ಪರಧರ್ಮವನ್ನು ನಿಂದಿಸುವವರಿಗೆ ಉಳಿಗಾಲವಿಲ್ಲ ಎಂಬುದಕ್ಕೆ ಈ ಭೂಕಂಪ ಸಾಕ್ಷಿ ಎಂದರು. ಒರಿಸ್ಸಾದಲ್ಲಿಯೂ, ಧರ್ಮಗುರು ಸ್ಟೇನ್ಸ್‌ ಮತ್ತು ಅವರಿಬ್ಬರು ಮಕ್ಕಳನ್ನು ಕೊಂದು ಹಾಕಿದ ಪರಿಣಾಮವಾಗಿ ಆ ರಾಜ್ಯ ಚಂಡಮಾರುತಕ್ಕೆ ಬಲಿಯಾಯಿತು ಎಂದು ಜಾನ್‌ ವಿವರಿಸಿದ್ದಾರೆ.

ಸಚಿವ ಜಾನ್‌, ಇತ್ತೀಚೆಗೆ ಕೇರಳದಲ್ಲಿ ಸುಮಾರು 40 ಮಂದಿಯನ್ನು ಬಲಿತೆಗೆದುಕೊಂಡ ಕಳ್ಳಬಟ್ಟಿ ದುರಂತದ ರೂವಾರಿ ಎಂಬ ಆರೋಪ ಎದುರಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಇಂದು ಆರೆಸ್ಸೆಸ್‌ ಪ್ರತಿಭಟನೆ : ಸಚಿವ ಟಿ. ಜಾನ್‌ ಅವರ ಹೇಳಿಕೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಶಾಖೆ ತೀವ್ರವಾಗಿ ಖಂಡಿಸಿದೆ. ಈ ಹೇಳಿಕೆಯನ್ನು ವಿರೋಧಿಸಿ ಬುಧವಾರದಂದು ರಾಜ್ಯಾದ್ಯಂತ ಪ್ರತಿಭಟನಾ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಆರೆಸ್ಸೆಸ್‌ ಪ್ರಚಾರ ಪ್ರಮುಖ್‌ ವಿಜಯ ಗೋಪಾಲ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X