Get Updates
Get notified of breaking news, exclusive insights, and must-see stories!

ಭೂಕಂಪದ ಹಾನಿ : ಹೆಚ್ಚು ತೆರಿಗೆ ಕಟ್ಟಲು ಸಿದ್ಧರಾಗಿ ಎಂದು ಪ್ರಧಾನಿ

ಲಖನೌ : ಮನುಕುಲದ ಮನವನ್ನೇ ಕಲಕಿದ ಘನಘೋರ ಭೂಕಂಪ ಉಂಟು ಮಾಡಿರುವ ವಿಪರೀತ ಹಾನಿಯ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಕೇಂದ್ರ ಸರಕಾರ ಮಂಡಿಸಲಿರುವ ಬಜೆಟ್‌ ಅಪ್ರಿಯವಾಗಿರುವ ಸ್ಪಷ್ಟ ಸೂಚನೆಯನ್ನು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೀಡಿದ್ದಾರೆ.

ಬರುವ ಆಯವ್ಯಯದಲ್ಲಿ ಹೆಚ್ಚು ತೆರಿಗೆ ಕಟ್ಟಲು ಸಿದ್ಧರಾಗಿರಿ ಎಂದೂ ಅವರು ರಾಷ್ಟ್ರದ ಜನತೆಗೆ ತಿಳಿಸಿದ್ದಾರೆ. ಭೂಕಂಪ, ಚಂಡಮಾರುತವೇ ಮೊದಲಾದ ಪ್ರಕೃತಿ ವಿಕೋಪಗಳು ರಾಷ್ಟ್ರಕ್ಕೆ ಅಪಾರ ಹಾನಿ ಉಂಟು ಮಾಡಿವೆ. ಪ್ರಕೃತಿ ವಿಕೋಪಗಳೇ ರಾಷ್ಟ್ರದ ಪ್ರಗತಿಗೆ ಅಡ್ಡಿ ಆಗಬಾರದು ಎಂಬ ಸತ್ಯವನ್ನು ಅರಿತು ಹೆಚ್ಚುವರಿ ತೆರಿಗೆ ವಿಧಿಸಲು ಅನುಮತಿ ನೀಡುವುದು ಅನಿವಾರ್ಯವಾದರೂ ಆಗಬಹುದು ಎಂದು ಅವರು ಹೇಳಿದ್ದಾರೆ.

ವೈಯಕ್ತಿಕ ಅಭಿಪ್ರಾಯ : ಗುಜರಾತ್‌ ಭೂಕಂಪದಲ್ಲಿ ಸತ್ತವರ ಸಂಖ್ಯೆ ಒಂದು ಲಕ್ಷದ ಗಡಿ ತಲುಪಬಹುದು ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಅವರು, ಇದು ಜಾರ್ಜ್‌ ಅವರ ವೈಯಕ್ತಿಕ ಅಂದಾಜಿನ ಹೇಳಿಕೆ ಎಂದರು.

3ರಂದು ಸರ್ವಪಕ್ಷ ಸಭೆ : ಪ್ರಧಾನಿ ವಾಜಪೇಯಿ ಅವರು ಮಂಗಳವಾರ ತಮ್ಮ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಗುಜರಾತ್‌ನಲ್ಲಿ ಕೈಗೊಳ್ಳಲಾಗಿರುವ ಪರಿಹಾರ ಕಾರ್ಯಗಳ ಕುರಿತಂತೆ ಚರ್ಚಿಸಲು ಪ್ರಧಾನಿ ಅವರು ಫೆ.3ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+