ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡ ಅತಿಥಿಗೃಹದ ಮೇಲೆ ಡಕಾಯಿತರ ದಾಳಿ : ಲಕ್ಷ ರು. ದರೋಡೆ
ಧಾರವಾಡ : ಇಲ್ಲಿನ ಖಾಸಗಿ ಕಾರ್ಖಾನೆಯಾಂದರ ಅತಿಥಿ ಗೃಹವೊಂದ ಮೇಲೆ ದಾಳಿ ಮಾಡಿರುವ ಡಕಾಯಿತರ ತಂಡ ಕಾವಲುಗಾರರನ್ನು ಥಳಿಸಿ 90 ಸಾವಿರ ರುಪಾಯಿ ನಗದು, ಕೈಗಡಿಯಾರ ಮತ್ತು ಚಿನ್ನಾಭರಣ ದೋಚಿರುವ ಪ್ರಕರಣ ಸೋಮವಾರ ಬೆಳಗಿನ ಜಾವ ವರಿದಿಯಾಗಿದೆ.
ಚಾಕು, ಬಡಿಗೆ ಹಾಗೂ ಕಲ್ಲುಗಳಿಂದ ಡಕಾಯಿತರ ತಂಡ ಈ ಕೃತ್ಯ ಎಸಗಿದೆ. ಸೋಮವಾರ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ರಜತಗಿರಿಯಲ್ಲಿರುವ ಭರೂಕಾ ಟೆಕ್ಸ್ಟೈಲ್ಸ್ ಅತಿಥಿಗೃಹಕ್ಕೆ ನುಗ್ಗಿದ ಆರು ಜನರಿದ್ದ ಡಕಾಯಿತರ ತಂಡ ಕಾವಲುಗಾರರಿಬ್ಬರ ಮೇಲೆ ಹಲ್ಲೆ ಮಾಡಿ, ಸಂಸ್ಥೆಯ ಅಧ್ಯಕ್ಷ ಶರ್ಮಾ ಹಾಗೂ ಕೋಲ್ಕತ್ತಾದ ಜೆ.ಪಿ. ಶರ್ಮಾ ಅವರ ಕೈಕಾಲುಗಳನ್ನು ಕಟ್ಟಿಹಾಕಿ ಸುಮಾರು 90 ಸಾವಿರ ರುಪಾಯಿ ನಗದು, ಮೂರು ಕೈಗಡಿಯಾರ ಹಾಗೂ ಚಿನ್ನದ ಉಂಗುರಗಳನ್ನು ದೋಚಿದೆ.
ಶನಿವಾರ ಬೆಳಗಿನ ಜಾವ ಸಿಲ್ವರ್ ಅಚರ್ಡ್ನ ಎಸ್.ಕೆ. ಜೋಷಿ ಅವರ ಮನೆಯ ಬಾಗಿಲು ಮುರಿದು ಒಂದು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿದ 24 ಗಂಟೆಗಳ ಅವಧಿಯಲ್ಲೇ ಮತ್ತೊಂದು ಡಕಾಯಿತಿ ನಗರದಲ್ಲಿ ನಡೆದಿದೆ. (ಹುಬ್ಬಳ್ಳಿ ಪ್ರತಿನಿಧಿಯಿಂದ)
Comments
Story first published: Wednesday, January 24, 2001, 5:30 [IST]