ಸಾವಿನ ನಡುವಲ್ಲೊಂದು ಹುಟ್ಟು :ಅಳುವ ಕಡಲಲಿ ತೇಲಿ ಬಂದ ಫೌಜಿ
ಅಂಜಾರ್ : ಸಾವಿನ ಊರಾಗಿ, ಭಯಾನಕವಾಗಿರುವ ಗುಜರಾತಿನಲ್ಲಿ ಸೋಮವಾರ ಬೆಳಿಗ್ಗೆ ಪವಾಡವೆಂಬಂತೆ, ಕಂದಮ್ಮನೊಬ್ಬ ಹುಟ್ಟಿದ್ದಾನೆ. ಎದೆ ಹಿಂಡುವ ಸಾವು ನೋವುಗಳ ಅಳಲು, ಜೀವ ಉಳಿದರೆ ಸಾಕು ಎಂಬ ಕರುಳಿನಾಳದ ಆಸೆಯ ಕೂಗುಗಳ ನಡುವೆ ಅಂಜಾರ್ನಲ್ಲಿ ಒಂದಷ್ಟು ಮಂದಿಯ ಮುಖದಲ್ಲಿ ನಗು ಕಾಣಿಸಿಕೊಂಡಿತು.
ಕಟ್ಟಡದ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದ ತುಂಬು ಗರ್ಭಿಣಿಯನ್ನು ಸೈನಿಕರು ರಕ್ಷಿಸಿದ್ದಾರೆ. ಕಳೆದ ಮೂರು ದಿನಗಳ ಕಾಲ ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದ ಮಹಿಳೆ, ಮಧು ಜೈನ್ ಎಂಬಾಕೆಯನ್ನು ಅವಶೇಷಗಳಡಿಯಿಂದ ತೆಗೆದ ತುಸು ಹೊತ್ತಿಗೇ ಅಂದರೆ ವಸಂತ ಪಂಚಮಿಯಂದು ಬೆಳಿಗ್ಗೆ ಆಕೆ, ಗಂಡು ಮಗುವಿಗೆ ಜನ್ಮ ನೀಡಿದರು. ಭುಜ್ ಪ್ರದೇಶದ ಜನರು ಅಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಹುಟ್ಟಿದ ಕಂದಮ್ಮನ ಅಳುದನಿಯನ್ನು ಕೇಳಿಸಿಕೊಂಡು ಮಡುಗಟ್ಟಿದ ವಿಷಾದವನ್ನು ತುಸು ಒತ್ತಟ್ಗಿಟ್ಟು ಮುಗುಳು ನಗುತ್ತಾರೆ.
ಬದುಕುವ ಛಲದ ಮಗುವಿನ ಹೆಸರು ಫೌಜಿ : ಅದೇ ಆಸ್ಪತ್ರೆಯ ವಾರ್ಡಿನಲ್ಲಿ ಭೂಕಂಪದ ಹರಿತವಾದ ಹಲ್ಲುಗಳಡಿಯಿಂದ ಬರೀ ಉಸಿರಿನೊಂದಿಗೆ ತಪ್ಪಿಸಿಕೊಂಡು ಬಂದು ಶುಶ್ರೂಷೆ ಪಡೆಯುತ್ತಿರುವವರಿದ್ದಾರೆ. ಅವರೆಲ್ಲರ ನರಳಾಟ, ಅಳಲಿನ ನಡುವೆ, ಫೌಜಿಯ ಅಳು ಅವರೆದೆಯಲ್ಲಿ ವಾತ್ಸಲ್ಯ, ಖುಷಿಯ ಸಣ್ಣ ಅಲೆಯೆಬ್ಬಿಸುತ್ತಿದೆ. ಹರಸಾಹಸ ಮಾಡಿ ತಾಯಿ ಮಗುವನ್ನು ಉಳಿಸಿದ ಸೈನಿಕರು ಮಹಿಳೆಯನ್ನು ಬದುಕಿಸಿದ್ದನ್ನು ಸ್ಮರಿಸಿಕೊಂಡು, ಮಿಲಿಟರಿ ಆಸ್ಪತ್ರೆಯ ಡಾಕ್ಟರು ಮಗುವಿಗೆ ಫೌಜಿ ಎಂದು ಹೆಸರಿಟ್ಟಿದ್ದಾರೆ.
ಫೌಜಿಯ ಅಮ್ಮ ಮಧು 24 ವರ್ಷ ವಯಸ್ಸಿನ ಮಹಿಳೆ. ಆಸ್ಪತ್ರೆಯಿಂದ ಹೊರ ಹೋಗಲು ಮನೆಯೆಂಬುದೇ ಇಲ್ಲ . ಮಗುವಿನ ಅಪ್ಪ ಎಲ್ಲಿದ್ದಾರೋ, ಅವರಿಗೇನಾಗಿದೆಯೋ, ಎಂದು ಬಿಕ್ಕುವ ಈ ಬಾಣಂತಿ 70 ಗಂಟೆಗಳ ಬಳಿಕ ಕಟ್ಟಡಗಳ ಅಡಿಯಿಂದ ಬದುಕಿ ಬಂದಿರುವ ಬಗ್ಗೆ ಸಮಾಧಾನವಿದೆ. ಒಂದು ದೊಡ್ಡ ಕಲ್ಲಿನ ಹಲಗೆ ನನ್ನ ಮೇಲೆ ಬಿದ್ದಿತ್ತು, ಸ್ಕೂಟರ್ ಕೂಡ ನನ್ನನ್ನು ಒತ್ತಿ ಹಿಡಿದಿತ್ತು ಎಂದು 24 ವರ್ಷ ವಯಸ್ಸಿನ ಮಧು ಹೇಳುತ್ತಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications