Get Updates
Get notified of breaking news, exclusive insights, and must-see stories!

ವೀರಪ್ಪನ್‌ ವಿರುದ್ಧ ವೈಜ್ಞಾನಿಕ ಕಾರ್ಯಾಚರಣೆ - ಆರ್‌. ರಾಜಗೋಪಾಲನ್‌

ಚೆನ್ನೈ : ಉಭಯ ರಾಜ್ಯಗಳ ಎಸ್‌ಟಿಎಫ್‌ ಪಡೆ ಹಾಗೂ ಗಡಿ ಭದ್ರತಾ ಪಡೆಗಳ ನಡುವೆ ಅತ್ಯುತ್ತಮ ಹೊಂದಾಣಿಕೆಯಿದೆ ಹಾಗೂ ವೀರಪ್ಪನ್‌ ಶಿಕಾರಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ತಮಿಳುನಾಡು ಪೊಲೀಸ್‌ ಮಹಾ ನಿರ್ದೇಶಕ ಆರ್‌. ರಾಜಗೋಪಾಲನ್‌ ಹೇಳಿದ್ದಾರೆ.

ಇತ್ತೀಚೆಗೆ ಕೇರಳದ ಎಸ್‌ಟಿಎಫ್‌ ಕೂಡ ವೀರಪ್ಪನ್‌ ಶಿಕಾರಿಗೆ ಕೈ ಜೋಡಿಸಿರುವ ಕುರಿತು ಸಂತಸ ವ್ಯಕ್ತಪಡಿಸಿದ ಅವರು, ಈ ಬಾರಿಯ ಕಾರ್ಯಾಚರಣೆಯಲ್ಲಿ ಯಶಸ್ಸಿನ ಬಗ್ಗೆ ನಾವು ಪೂರ್ಣ ವಿಶ್ವಾಸದಿಂದಿದ್ದೇವೆ ಎಂದರು. ವೆಲ್ಲೂರಿನಲ್ಲಿ ಸೋಮವಾರ ನಡೆದ ಪೊಲೀಸ್‌ ಅಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ತಮಿಳುನಾಡಿನ ಅರಣ್ಯದಿಂದ ನರಹಂತಕ ವೀರಪ್ಪನ್‌ ಕೇರಳದ ಕಾಡಿಗೆ ಜಾರಿಕೊಂಡಿದ್ದಾನೆ ಎನ್ನುವ ವರದಿಗಳನ್ನು ನಿರಾಕರಿಸಿದ ಅವರು, ಈ ವಿಷಯ ತಮಗೆ ಗೊತ್ತಾದದ್ದು ಮಾಧ್ಯಮಗಳಿಂದಲೇ ಎಂದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+