Get Updates
Get notified of breaking news, exclusive insights, and must-see stories!

ರಾಜ್ಯದ ಮೇಲೆ ಚಳಿಯ ಅಲೆಯ ಕುಳಿರ್ಗಾಳಿ

ಬೆಂಗಳೂರು : ಭಾರತದೊಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಯುದ್ಧವನ್ನೇ ಸಾರಿರುವ ಪಾಕಿಸ್ತಾನದ ಕಲ್ಲೆದೆಯೂ ಕರಗಿದೆ. ಪಾಕಿಸ್ತಾನ ಕೂಡ ಗುಜರಾತ್‌ ಭೂಕಂಪ ಸಂತ್ರಸ್ತರ ನೆರವಿಗೆ ಮುಂದಾಗುವ ನಿರ್ಧಾರ ತಳೆದಿದೆ. ಮನೆ, ಮಾರು, ಮಡದಿ ಮಕ್ಕಳನ್ನು ಕಳೆದುಕೊಂಡು ನಿರ್ಗತಿಕರಾದವರಿಗೆ ದೇಶ ವಿದೇಶಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೊರೆಯುತ್ತಿರುವ ಚಳಿಯಲ್ಲೂ ಪರಿಹಾರ ಕಾಮಗಾರಿಗಳೂ ಸಮರೋಪಾದಿಯಲ್ಲಿ ಸಾಗಿವೆ.

ಭಾನುವಾರ ಬೆಳಗ್ಗೆಯೂ ಸಹ ಮುಂಬಯಿ ಹಾಗೂ ಅಹಮದಾಬಾದ್‌ಗಳಲ್ಲಿ ಮತ್ತೆ ಭೂಮಿ ಕಂಪಿಸಿದೆ. ಭೂಕಂಪದ ಭೀತಿಯಿಂದ ದೇಶವೇ ನಡುಗುತ್ತಿರುವಾಗ ಶೀತಮಾರುತವೂ ಹಗ್ಗ ಕಂಡು ಹೆದರಿದವರ ಮೈ ಮೇಲೆ ಹಾವನ್ನೇ ಎಸೆದಂತೆ ತಮ್ಮ ಪ್ರತಾಪವನ್ನೂ ಈ ಸಂದರ್ಭದಲ್ಲೇ ತೋರಿದೆ.

ರಾಜ್ಯದ ಮೇಲೂ ಉತ್ತರದ ಕಡೆಯಿಂದ ಶೀತ ಮಾರುತಗಳು ಬೀಸುತ್ತಿವೆ. ರಾಜ್ಯದಲ್ಲಿ ಎಂದಿನಂತೆ ಒಣಹವೆ ಮುಂದುವರಿದಿದೆಯಾದರೂ ಚಳಿಯ ಅಲೆಗಳಿಂದ ಕೂಡಿದ ಕುಳಿರ್ಗಾಳಿ ಬೀಸುತ್ತಿದೆ. ತತ್ಪರಿಣಾಮವಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ ಕುಸಿತ ಕಂಡಿದೆ.

ಉತ್ತರ ಒಳನಾಡಿನ ಕೆಲವೆಡೆ ಮಾತ್ರ ಕನಿಷ್ಠ ತಾಪಮಾನ ಅಧಿಕವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಲ್ಪ ಬದಲಾವಣೆ ಕಂಡುಬಂದಿದೆ. ರಾಜ್ಯದ ಅತಿ ಕನಿಷ್ಠ ಉಷ್ಣಾಂಶ 10.4 ಡಿಗ್ರಿ ಸೆಲ್ಸಿಯಸ್‌ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ.

ಮುನ್ಸೂಚನೆಯ ರೀತ್ಯ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ. ಚಳಿಯ ಅಲೆಗಳಿಂದ ಕೂಡಿದ ಕುಳಿರ್ಗಾಳಿಯೂ ಬೀಸಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ರೀತ್ಯ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸೂಚನೆ ದೊರೆತಿದೆ. ಭಾನುವಾರ ಬೆಳಗ್ಗೆ 11 ಗಂಟೆಯ ಸಮಯದಲ್ಲೂ ಬೆಂಗಳೂರಿನಲ್ಲಿ ಚಳಿಯ ಅನುಭವ ಆಗುತ್ತಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+