ಮುಂಬಯಿ ಮತ್ತು ಅಹ್ಮದಾಬಾದ್ನಲ್ಲಿ ಮತ್ತೆ ನಡುಗಿದ ಧರೆ
ಅಹ್ಮದಾಬಾದ್ : ಶುಕ್ರವಾರದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 17 ಸಾವಿರವನ್ನೂ ದಾಟಿದೆ. ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಕಚ್ ಪ್ರದೇಶದಲ್ಲಿ ಶೇ. 90ರಷ್ಟು ಮನೆಗಳು ನೆಲಕಚ್ಚಿವೆ. ಊರಿಗೆ ಊರೇ ಸ್ಮಶಾನವಾಗಿದೆ. ಅಳಲು ಕಣ್ಣೀರೇ ಬತ್ತಿ ಹೋಗಿದೆ. ಎಲ್ಲೆಡೆ ಹೆಣಗಳನ್ನು ರಾಶಿ ಹಾಕಿ ಸುಡಲಾಗುತ್ತಿದೆ. ಕಟ್ಟಿಗೆಗೂ ಬರ. ಈ ಮಧ್ಯೆ ಅಹ್ಮದಾಬಾದ್ ಮತ್ತು ಮುಂಬಯಿನಲ್ಲಿ ಭಾನುವಾರ ಬೆಳಿಗ್ಗೆ 6.30ಕ್ಕೆ ಮತ್ತೆ ಎರಡು ಸೆಕೆಂಡುಗಳ ಕಾಲ ಧರೆ ಕಂಪಿಸಿದ್ದು, ಸಾವಿರಾರು ಮಂದಿ ಜೀವ ಭಯದಿಂದ ತತ್ತರಿಸಿದ್ದಾರೆ.
ಭಾನುವಾರ ಬೆಳೆಗ್ಗಿನ ಭೂ ನಡುಕದಿಂದಾಗಿ ಯಾವುದೇ ಸಾವು ನೋವು ಘಟಿಸಿರುವ ವರದಿಯಾಗಿಲ್ಲ. ಆದರೆ ಶುಕ್ರವಾರದ ಭೂಕಂಪದಿಂದ ಭಯ ಭೀತರಾಗಿರುವ ಜನ, ಮನೆಗಳ ಒಳ ಹೋಗಲೂ ಹೆದರುತ್ತಿದ್ದಾರೆ. ಬಯಲಿನಲ್ಲಿ ಹೊಲ ಗದ್ದೆಗಳಲ್ಲಿ , ರಸ್ತೆಗಳಲ್ಲಿ ಜೀವನ ತಳ್ಳುತ್ತಿದ್ದಾರೆ.
ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಶವಗಳನ್ನು ಹೊರ ತೆಗೆಯಲು ಸೇನೆ ಸಿಬ್ಬಂದಿ, ಸಾರ್ವಜನಿಕರು ಹರ ಸಾಹಸ ಮಾಡುತ್ತಿದ್ದಾರೆ. ಸಾವಿನ ಸಂಖ್ಯೆ 25 ಸಾವಿರ ಮೀರುವ ನಿರೀಕ್ಷೆ ಇದೆ. ಇನ್ನೂ 10 ಸಾವಿರ ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಗುಜರಾತಿನಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ರಾಜ್ಯದಲ್ಲಿ 11 ಸಾವಿರ ಜನ ಸತ್ತಿರುವುದಾಗಿ ಶಂಕಿಸಲಾಗಿದೆ. 33 ಸಾವಿರ ಮಂದಿ ಗಾಯಗೊಂಡಿದ್ದಾರೆ. ಭುಜ್ ಜಿಲ್ಲೆಯಲ್ಲಿ 6 ಸಾವಿರ ಮಂದಿ ಸತ್ತಿರುವುದಾಗಿ ಶಂಕಿಸಲಾಗಿದ್ದರೂ, ಸಂಖ್ಯೆ 10 ಸಾವಿರ ದಾಟಬಹುದು. ಅಹ್ಮದಾಬಾದ್ನಲ್ಲಿ ಐನೂರಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಈಗಾಗಲೇ 150 ಶವಗಳು ಪತ್ತೆಯಾಗಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications