ಏಪ್ರಿಲ್ನೊಳಗೆ ಪಶ್ಚಿಮ ಕರಾವಳಿಯಲ್ಲಿ ಭಾರಿ ಭೂಕಂಪ ಸಾಧ್ಯತೆ
ನವದೆಹಲಿ : ಶು-ಕ್ರ-ವಾ-ರ-ದ ಭೀಕರ ಭೂಕಂ-ಪ- ಕೇಂದ್ರ- ಸ್ಥಾನವಾದ ಭುಜ್-ನ-ಲ್ಲಿ ಇನ್ನೂ ಕೆಲ-ವು ಭೂಕಂ-ಪ-ಗ-ಳು ಸಂಭ-ವಿ-ಸು-ವ ಸಾಧ್ಯ-ತೆ-ಯಿ-ದೆ ಎಂದು ಭಾರ-ತೀ-ಯ ಭೂಗ-ರ್ಭಶಾಸ್ತ್ರ ಇಲಾ-ಖೆ-ಯ ಉಪ ಮಹಾನಿರ್ದೇ-ಶ-ಕ ಎಸ್.ಎನ್. -ಭ-ಟ್ಟಾ-ಚಾ-ರ್ಯ ಹೇಳಿ-ರುವ ಬೆನ್ನಲ್ಲೇ ದೇಶದ ಪಶ್ಚಿಮ ಕರಾವಳಿಯಲ್ಲಿ ಏಪ್ರಿಲ್ ತಿಂಗಳೊಳಗೆ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂಡಮಾನ್ ನಿಕೋಬಾರ್ ದ್ವೀಪಗಳು, ಗುಜರಾತ್, ಕೇರಳ ಮತ್ತು ಕೊಂಕಣ ಭಾಗವೂ ಸೇರಿದಂತೆ ಪಶ್ಚಿಮ ಕರಾವಳಿಯಲ್ಲಿ ಹಾಗೂ ಈಶಾನ್ಯ ಭಾರತದಲ್ಲಿ ಮತ್ತೊಂದು ಭೂಕಂಪ ಅಪ್ಪಳಿಸಲಿದೆ ಎಂದು ಗುಜರಾತ್ ಭೂಕಂಪದ ಬಗ್ಗೆ ಮುನ್ಸೂಚನೆ ನೀಡಿದ್ದ ಜವಾಹರಲಾಲ್ ವಿಶ್ವವಿದ್ಯಾಲಯದ ಪರಿಸರ ವಿಭಾಗದ ಪ್ರಾಧ್ಯಾಪಕರಾದ ಖ್ಯಾತ ವಿಜ್ಞಾನಿ ಡಾ. ಸೌಮಿತ್ರಾ ಮುಖರ್ಜಿ ಹೇಳಿದ್ದಾರೆ.
ಗುಜರಾತ್ನ ಬರ ಪರಿಸ್ಥಿತಿ ಹಾಗೂ ಭೂಕಂಪದ ಬಗ್ಗೆ ಅಧ್ಯಯನ ನಡೆಸಿರುವ ಅವರು, ಭಾರಿ ಹಾಗೂ ಬೃಹತ್ ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವ ಮುನ್ನ ಯಾವುದೇ ಪೂರ್ವಾಗ್ರಹ ಇಲ್ಲದೆ ಪುನರ್ಪರಿಶೀಲನೆ ನಡೆಸಬೇಕು ಎಂಬ ಕಿವಿ ಮಾತೂ ಹೇಳಿದ್ದಾರೆ. ರಾಷ್ಟ್ರದ ಐದು ಭೂಕಂಪ ಭೀತಿಯ ವಲಯಗಳಲ್ಲಿ ದೆಹಲಿ ಹಾಗೂ ಜಬಲ್ಪುರಗಳೂ ಸೇರುವ ಸಾಧ್ಯತೆ ಇದೆ ಎಂಬ ಸುಳಿವನ್ನೂ ನೀಡಿದ್ದಾರೆ.
ಭುಜ್ ಭೂಕಂಪದ ಬಗ್ಗೆ ಸುಳಿವು ಸಿಕ್ಕಿತ್ತೇ? : 17 ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಭೀಕರ ಭುಜ್ ಭೂಕಂಪದ ಬಗ್ಗೆ ಮೊದಲೇ ಸರಕಾರಕ್ಕೆ ತಿಳಿದಿತ್ತೇ? ಹೌದೆನ್ನುತ್ತದೆ ಈ ವರಿದೆ. ಗುಜರಾತ್ನ ಭೂಕಂಪದ ಸಾಧ್ಯತೆಗಳ ಬಗ್ಗೆ ತಾವು ಕಳೆದ ಅಕ್ಟೋಬರ್ ತಿಂಗಳಿನಲ್ಲೇ ಸರಕಾರಕ್ಕೆ ಮುನ್ಸೂಚನೆ ನೀಡಿದ್ದಾಗಿ ಡಾ. ಸೌಮಿತ್ರಾ ಮುಖರ್ಜಿ ಹೇಳಿದ್ದಾರೆ. ಈ ಸಂಬಂಧದ ವರದಿ ಜರ್ನಲ್ ಆಫ್ ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ನಲ್ಲಿ ಪ್ರಕಟವಾಗಿತ್ತು ಎಂದೂ ಅವರು ತಿಳಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications