Get Updates
Get notified of breaking news, exclusive insights, and must-see stories!

ಭುಜ್‌ನಲ್ಲಿರುವ ಬೆಂಗಳೂರಿನ 23 ಮಕ್ಕಳ ಬಗ್ಗೆ ಏನೂ ತಿಳಿದಿಲ್ಲ

ಬೆಂಗಳೂರು : ಭೂಕಂಪದ ಕೆನ್ನಾಲಗೆಗೆ ತುತ್ತಾಗಿರುವ ಭುಜ್‌ ಜಿಲ್ಲೆಗೆ ಪ್ರವಾಸಕ್ಕೆ ಹೋಗಿರುವ ನಗರದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆಯ 24 ವಿದ್ಯಾರ್ಥಿಗಳ ಬಗೆಗೆ ಶುಕ್ರವಾರ ಮುಂಜಾನೆಯಿಂದ ಯಾವುದೇ ಸಮಾಚಾರ ಸಿಗದೆ, ಅಪ್ಪ ಅಮ್ಮಂದಿರು ಕಳವಳದಿಂದಿದ್ದಾರೆ.

ಶಾಲೆಯ ಸೃಷ್ಟಿ ಡಿಸೈನ್‌ ಸೆಂಟರ್‌ನ ಮಕ್ಕಳು ಮೂವರು ಉಪನ್ಯಾಸಕರ ಜತೆಯಲ್ಲಿ ಕಳೆದ ಜನವರಿ 12ರಂದು ಪ್ರವಾಸ ಹೋಗಿದ್ದರು. ನಿಗದಿತ ಕಾರ್ಯಕ್ರಮದಂತೆ ಶುಕ್ರವಾರ ಮುಂಜಾನೆ ಭುಜ್‌ ನಗರಕ್ಕೆ ತಲುಪಿ, ಅದೇ ಸಂಜೆ ಅಲ್ಲಿಂದ ರೈಲಿನಲ್ಲಿ ಅಲಹಾಬಾದಿಗೆ ಹೋಗುವ ಕಾರ್ಯಕ್ರಮವಿತ್ತು. ಗುರುವಾರ ಹಾಗೂ ಶುಕ್ರವಾರ ಭೂಕಂಪ ಸಂಭವಿಸುವ ಮುನ್ನ ಕೆಲ ಮಕ್ಕಳು ಪೋಷಕರನ್ನು ದೂರವಾಣಿ ಮೂಲಕ ಮಾತನಾಡಿಸಿದ್ದರು. ಆದರೆ ಅದಾದ ನಂತರ ಶಾಲೆಗಾಗಲೀ, ಯಾವುದೇ ಪೋಷಕರಿಗಾಗಿ ಮಕ್ಕಳ ವರ್ತಮಾನ ಗೊತ್ತಾಗಿಲ್ಲ.

ಶಾಲೆಗೆ ಪೋಷಕರು ಎಡತಾಕುತ್ತಿರುವುದು ಸಾಮಾನ್ಯವಾಗಿದ್ದು, ಶಾಲಾ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ ಪ್ರವಾಸಿ ತಂಡದಲ್ಲಿ ಬೆಂಗಳೂರಿನ ಮಕ್ಕಳಲ್ಲದೆ ಇತರ ರಾಜ್ಯಗಳ ಮಕ್ಕಳೂ ಇದ್ದು, ಆ ಪೈಕಿ ಗುಜರಾತ್‌ನಲ್ಲೂ ಕೆಲವರ ಸಂಬಂಧಿಕರಿದ್ದಾರೆ ಎದು ಶಾಲಾ ಆಡಳಿತ ಹೇಳಿದೆ.

ರಾಜ್ಯದಲ್ಲೂ ಭೂಕಂಪನದ ಅನುಭವ : ಭೂಕಂಪದ ಬಿಸಿ ಗುಜರಾತ್‌ ಹಾಗೂ ಭುಜ್‌ಗೆ ತಟ್ಟಿದ್ದರೆ, ಕರ್ನಾಟಕದ ಕೆಲವೆಡೆಗಳಲ್ಲೂ ಭೂಮಿ ಅದುರಿದ ಅನುಭವಗಳು ವರದಿಯಾಗಿವೆ. ಬೀದರ್‌, ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳಲ್ಲಿ ಶುಕ್ರವಾರ ಮುಂಜಾನೆ ಸುಮಾರು 8.50ರ ಹೊತ್ತಿಗೆ ಭೂಮಿ ಅದುರಿದ ಅನುಭವ ಜನರಿಗಾಗಿದೆ.

ಆದರೆ ಮುಂಬೈ ಮೂಲದ ಬಾಬಾ ಅಟಾಮಿಕ್‌ ಸಂಶೋಧನಾ ಕೇಂದ್ರದ ಪ್ರಕಾರ ಕರ್ನಾಟಕದ ಯಾವ ಭಾಗದಲ್ಲೂ ಭೂಕಂಪ ಉಂಟಾಗಿಲ್ಲ. ಬೆಂಗಳೂರಿನ ಹವಾಮಾನ ಇಲಾಖೆಯಲ್ಲಿ ಭೂಕಂಪ ದಾಖಲಿಸಿ, ತೋರುವ ಮಾಪಕವಿಲ್ಲದ ಕಾರಣ ಇಲ್ಲಿ ಭೂಕಂಪ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ. ಆದರೂ ಕೆಲವು ಬೆಂಗಳೂರಿಗರು ತಮಗೂ ಭೂಕಂಪದ ಅನುಭವವಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+