ಹಾಸನ- ಮಂಗಳೂರು ಬ್ರಾಡ್ಗೇಜ್ : ಶೀಘ್ರ ಕಾಮಗಾರಿಗೆ ಆಗ್ರಹ
ಬೆಂಗಳೂರು : ಹಾಸನ- ಮಂಗಳೂರು ನಡುವಣ ರೈಲ್ವೆ ಮಾರ್ಗವನ್ನು ಬ್ರಾಡ್ಗೇಜ್ಗೆ ಪರಿವರ್ತಿಸುವ ಬಾಕಿ ಕಾಮಗಾರಿಯನ್ನು ಪೂರೈಸಲು 171 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಹಾಸನ ರೈಲ್ವೆ ಸಂಪರ್ಕ ಜಾಲವು ಕರ್ನಾಟಕ ಅಭಿವೃದ್ಧಿ ಪಥದ ಹೆದ್ದಾರಿಯಾಗಿದೆ. ಈ ಕಾಮಗಾರಿಯ ವಿಳಂಬದಿಂದಾಗಿ ಪ್ರತಿನಿತ್ಯ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವ ಸುಮಾರು 6 ಸಾವಿರ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೊಯಿಲಿ ಪತ್ರದಲ್ಲಿ ತಿಳಿಸಿದ್ದಾರೆ. ರೈಲ್ವೆ ಸಚಿವರಿಗೆ ಬರೆದ ಪತ್ರವನ್ನು ಶನಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಯಿತು.
ಕಾಮಗಾರಿ ಪೂರ್ಣಗೊಳ್ಳಲು ತಕ್ಷಣ ಹಣ ಬಿಡುಗಡೆ ಮಾಡುವಂತೆ ಹಾಗೂ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸುವಂತೆ ಮೊಯಿಲಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕಾಮಗಾರಿ ಕೆಲಸದಿಂದಾಗಿ 1996 ರಿಂದಲೂ ಹಾಸನ ಸಂಪರ್ಕ ಕಡಿದುಕೊಂಡಿರುವುದನ್ನು ಅವರು ಎತ್ತಿ ತೋರಿಸಿದ್ದಾರೆ.
(ಯುಎನ್ಐ)