ರಾಜ್ಯಪಾಲಮ್ಮ ಕೊನೆಗೂ ಪೂರಾ ಕನ್ನಡದಾಗೆ ಮಾತಾಡಿದರು...
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಶುಕ್ರವಾರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನೆರೆದಿದ್ದ ಎಲ್ಲರಲ್ಲಿ ವಿದ್ಯುತ್ ಸಂಚಲನ. ಮಾಮೂಲಿನಂತೆ ಬಂದು ಹೋಗುವ ಗಣರಾಜ್ಯೋತ್ಸವದ ಧ್ವಜಾರೋಹಣ, ಪೆರೇಡು, ಭಾಷಣಗಳಷ್ಟೇ ಅಲ್ಲಿರಲಿಲ್ಲ. ಹಾಗಂತ ಮಕ್ಕಳ ಯಾವುದೋ ಅನನ್ಯ ಪ್ರದರ್ಶನ ಇಂಥ ಮೋಡಿ ಮಾಡಲಿಲ್ಲ. ಮೋಡಿ ಮಾಡಿದ್ದು ರಾಜ್ಯಪಾಲರಾದ ವಿ.ಎಸ್.ರಮಾದೇವಿ. ಅದೂ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿ !
ಸುದ್ದಿದೇವಿ : ರಮಾದೇವಿ ರಾಜ್ಯಪಾಲರಾದ ತಕ್ಷಣ ಮಹಿಳೆ ಎಂಬ ಕಾರಣಕ್ಕೆ ಸುದ್ದಿ ಮಾಡಿದರು. ಆಮೇಲೆ ದಿನಕ್ಕೆ ಕನಿಷ್ಠ್ಠ ಒಂದಾದರೂ ಕಾರ್ಯಕ್ರಮ; ಅದು ಯಾವುದಾದರೂ ಕಟ್ಟಡದ ಉದ್ಘಾಟನೆಯಾಗಿರಬಹುದು ಅಥವಾ ಯಾವುದೋ ಮಹಿಳಾ ವೇದಿಕೆಯ ವಿಚಾರ ಸಂಕಿರಣವಾಗಿಬಹುದು. ಹೋದಲ್ಲೆಲ್ಲಾ ಪುನರುಚ್ಚಾರಗಳ ಸುರಿಮಳೆ ಅಂತ ಜನ ಮಾತಾಡಿಕೊಳ್ಳತೊಡಗಿದರು. 2001ರ ಜನವರಿಯಿಂದ ನಾನು ಕರೆಯುವ ಫಂಕ್ಷನ್ಗಳಿಗೆಲ್ಲಾ ಹೋಗೋದಿಲ್ಲ ಅಂತ ಕಳೆದ ವರ್ಷಾಂತ್ಯದಲ್ಲಿ ಹೇಳಿ ಮತ್ತೆ ಅವರೇ ಸುದ್ದಿ ಮಾಡಿದರು. ಆದರೆ ಅದನ್ನು ಎಳ್ಳಷ್ಟೂ ಪಾಲಿಸದೆ ಇವತ್ತೂ ಸುದ್ದಿಯಲ್ಲಿರುವವರು ರಮಾದೇವಿ.
ಮಾಹಿತಿ ತಂತ್ರಜ್ಞಾನ ಹಳ್ಳಿ ಮಕ್ಕಳಿಗೂ ಮುಟ್ಟಬೇಕು. ಭಾವೈಕ್ಯತೆ ಅಂದರೇನು ಅಂತ ವಿಶ್ವಕ್ಕೆ ಸಾರಿದವರು ನಾವು. ಕಬ್ಬು ಬೆಳೆದು, ಸಕ್ಕರೆ ತಯಾರಿಸುವಲ್ಲಿ, ಹತ್ತಿ ಬೆಳೆ ತೆಗೆಯುವಲ್ಲಿ ನಾವು ಸಂಪೂರ್ಣ ಸ್ವಾವಲಂಬಿಗಳಾಗಿದ್ದೇವೆ. ಆದರೆ ಉತ್ಪನ್ನಗಳ ದಾಸ್ತಾನಿಗೆ ಸಾಕಷ್ಟು ಗೋದಾಮುಗಳಿಲ್ಲ. ಕರ್ನಾಟಕ ಒಂದು ಮಾದರಿ ರಾಜ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಇವತ್ತಿನ ಪರಿಸ್ಥಿತಿಯಲ್ಲಿ ಸಹೋದರ ಭಾವದ ಬಗೆಗೆ ವಿವೇಚಿಸಬೇಕಾದುದು ಅತ್ಯವಶ್ಯ... ಹೀಗೇ ಕನ್ನಡದಲ್ಲಿ ಹೆಣೆದ ಸಾಧನೆ- ಸಲಹೆಗಳನ್ನು ಸ್ಕಿೃಪ್ಟೊಂದನ್ನು ಕೈಲಿ ಹಿಡಿದು ಗಡಿಬಿಡಿಯಿಂದ ರಮಾದೇವಿ ಓದಿಬಿಟ್ಟರು. ಓದಿಬಿಟ್ಟರು ಅನ್ನೋದಕ್ಕಿಂತ ಅಲ್ಲಲ್ಲಿ ತಡಬಡಾಯಿಸುತ್ತಲೇ ಒಪ್ಪಿಸಿದರು ಅನ್ನೋದೇ ಸೂಕ್ತ.
ಕಾರ್ಯಕ್ರಮದಲ್ಲಿ ಬಣ್ಣಬಣ್ಣದ ವೇಷ ಭೂಷಣಾಧಾರಿ ಚಿಣ್ಣರಿಂದ ರಂಗುರಂಗು ಸಾಂಸ್ಕೃತಿಕ ಸೋಜಿಗಗಳು ಪ್ರದರ್ಶಿತವಾದವು. ತಾಲೀಮಿನಲ್ಲಿ ಶಿಸ್ತು ಎದ್ದು ಕಾಣುತ್ತಿತ್ತು. ರಾಜ್ಯಾದ್ಯಂತ ಗಣರಾಜ್ಯೋತ್ಸವವನ್ನು ಶಾಂತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಖುರ್ಷಿದ್ ಆಲಂ ಖಾನ್ ರಾಜ್ಯಪಾಲರಾಗಿದ್ದಾಗ ಕನ್ನಡವನ್ನ ಕಲೀಲೇ ಇಲ್ಲ ಎಂಬೊಂದು ಕೊರತೆಯನ್ನು ಕನ್ನಡ ಪ್ರೇಮಿಗಳು ತೋಡಿಕೊಂಡಿದ್ದರು. ಅವರು ಮಾಡದ್ದನ್ನ ಕರ್ನಾಟಕದ ಪ್ರಥಮ ಮಹಿಳಾ ರಾಜ್ಯಪಾಲರು ಮಾಡಿ ತೋರಿದ್ದಾರೆ. ಈ ಭಾಷಣವೇ ಪೂರ್ಣ ಪ್ರಮಾಣದ ಕನ್ನಡ ಕಲಿಕೆಗೆ ನಾಂದಿಯಾಗಲಿ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications