ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಂಪಕ್ಕೆ ತತ್ತರಿಸಿದ ದೇಶ : ಕ್ಷಣ ಕ್ಷಣಕ್ಕೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

By Staff
|
Google Oneindia Kannada News

ನವದೆಹಲಿ : ಕ್ಷಣದಿಂದ ಕ್ಷಣಕ್ಕೆ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದ್ದು, ಗುಜರಾತ್‌ ರಾಜ್ಯವೊಂದರಲ್ಲೇ ಕನಿಷ್ಠ 600 ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅವಶೇಷಗಳಡಿಯಲ್ಲಿ ಸಿಕ್ಕು ಸತ್ತ ವರ ದೇಹಗಳನ್ನು ಹೊರ ತೆಗೆವ ಕಾರ್ಯ ಪ್ರಗತಿಯಲ್ಲಿದ್ದು , ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಭೂಕಂಪದಿಂದಾಗಿ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ಗಂಜಿಗಾಗಿ ಪರದಾಡುತ್ತಿದ್ದಾರೆ. 50 ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ಭೂಕಂಪ ಇದೆಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

ಈ ನಡುವೆ ಗುಜರಾತ್‌ನ ಭೂಕಂಪ ಗ್ರಸ್ತ ಪ್ರದೇಶಗಳಿಗೆ ನೆರೆಯ ರಾಜ್ಯಗಳ ಆಹಾರ ಹಾಗೂ ಔಷಧಿ ರೂಪದ ಸಹಾಯ ಹರಿದು ಬರುತ್ತಿದೆ. ಸಂತ್ರಸ್ತರ ತಕ್ಷಣದ ಅಗತ್ಯಗಳ ಪೂರೈಕೆಗಾಗಿ ಸ್ವಯಂ ಸೇವಾ ಸಂಸ್ಥೆಗಳು, ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಟೊಂಕ ಕಟ್ಟಿ ನಿಂತಿವೆ. ಈ ನಡುವೆ ತುರ್ತು ಸಂಪುಟ ಸಭೆ ನಡೆಸಿರುವ ಪ್ರಧಾನಿ ವಾಜಪೇಯಿ, ಎಲ್ಲಾ ರೀತಿಯ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಪರಿಹಾರ ಕಾರ್ಯಕ್ಕಾಗಿ ಗುಜರಾತ್‌ಗೆ ಸೇನೆಯೂ ರವಾನೆಯಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಉತ್ತರ ಹಾಗೂ ಈಶಾನ್ಯದ ರಾಜ್ಯಗಳಲ್ಲದೆ ದಕ್ಷಿಣದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾಗಳ ಕೆಲವು ಪ್ರದೇಶಗಳಲ್ಲೂ ಭೂಕಂಪ ಸಂಭವಿಸಿದೆ. ಆದರೆ, ಅನಾಹುತದ ಉಗ್ರರೂಪ ಗುಜರಾತ್‌ ಪಾಲಿಗೆ.

ಭೀಕರ ದುರಂತ- ಅಡ್ವಾನಿ : ಪರಿಹಾರೋಪಾಯಗಳನ್ನು ಸಮರಗತಿಯಲ್ಲಿ ಕೈಗೊಳ್ಳಲಾಗುತ್ತಿದೆ. ತಾವು ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರ ಸೇರಿದಂತೆ ಗುಜರಾತ್‌ನ ಭುಜ್‌, ಅಹಮದಾಬಾದ್‌, ಸೂರತ್‌, ನೆಸಾನಿ ಮಾತ್ರವಲ್ಲದೆ ದೇಶದ ಇತರ ಭಾಗಗಳಾದ ಚಂಡೀಗಢ, ಆಂಧ್ರಪ್ರದೇಶದ ವಿಜಯವಾಡ, ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ ಎಂದರು.

ವರದಿಗಳ ಪ್ರಕಾರ ಗುಜರಾತ್‌ನ ಕಚ್‌ ಪ್ರದೇಶ ಭೂಕಂಪದ ತೀವ್ರ ಪರಿಣಾಮ ಕಂಡಿದೆ. ಅಲ್ಲಿ 200 ಕ್ಕಿಂತಲೂ ಹೆಚ್ಚು ಮಂದಿ ಸತ್ತಿದ್ದಾರೆ. ಉಳಿದಂತೆ ಅಹಮದಾಬಾದ್‌ನಲ್ಲಿ 185, ಸೂರತ್‌ನಲ್ಲಿ 32, ರಾಜ್‌ಕೋಟ್‌ನಲ್ಲಿ 150 ಜನ ಸಾವಿಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಕಂಪ 7 ಜನರನ್ನು ಬಲಿ ತೆಗೆದುಕೊಂಡಿದೆ. ದೆಹಲಿಯಲ್ಲಿ ಯಾವುದೇ ಜೀವಹಾನಿಯಾದ ಘಟನೆಗಳು ವರದಿಯಾಗಿಲ್ಲ .

ವಿಮಾನ ನಿಲ್ದಾಣಗಳಿಗೆ ಧಕ್ಕೆ : ಉತ್ತರವಲಯದ ಬಹುತೇಕ ವಿಮಾನ ನಿಲ್ದಾಣಗಳು ಭೂಕಂಪದಿಂದ ಜಖಂಗೊಂಡಿರುವುದರಿಂದ ಅಂತರರಾಷ್ಟ್ರೀಯ ವಾಯುಮಾರ್ಗಕ್ಕೆ ಅಡಚಣೆ ಉಂಟಾಗಿದೆ. ಕೆಲವು ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿನ ಕಟ್ಟಡಗಳು ಬಿರುಕು ಬಿಟ್ಟಿವೆ. ಆದರೆ, ಈವರೆಗೂ ಯಾವುದೇ ವಿಮಾನದ ಹಾರಾಟಕ್ಕೆ ತೊಂದರೆ ಉಂಟಾಗಿರುವ ವರದಿಗಳು ಬಂದಿಲ್ಲ . ಈ ನಡುವೆ ಗುಜರಾತ್‌ಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯುವ ವಿಮಾನಗಳ ಹಾರಾಟದಲ್ಲಿ ಯಾವುದೇ ಹಸ್ತಕ್ಷೇಪ ನಡೆಸದಿರುವಂತೆ ನಾಗರಿಕ ವಿಮಾನ ಯಾನದ ಮಹಾ ನಿರ್ದೇಶಕರು ಆಜ್ಞೆ ಹೊರಡಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X