ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜ.26ರಿಂದ ಕಾರವಾರದಲ್ಲಿ ಪತ್ರಾಗಾರ ಸಪ್ತಾಹ
ಕಾರವಾರ : ಗಣರಾಜ್ಯೋತ್ಸವ ದಿನವಾದ ಜನವರಿ 26ರಿಂದ ಇಲ್ಲಿ ನ ಗುರುಭವನದಲ್ಲಿ ಪತ್ರಾಗಾರ ಸಪ್ತಾಹ ನಡೆಯಲಿದೆ. ಕರ್ನಾಟಕ ಪತ್ರಾಗಾರ ನಿರ್ದೇಶನಾಲಯ ಈ ಸಪ್ತಾಹವನ್ನು ಆಯೋಜಿಸಿದೆ. ಸಪ್ತಾಹದ ಅಂಗವಾಗಿ ದಾಖಲೆಗಳ ಪ್ರದರ್ಶನವೂ ನಡೆಯಲಿದೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಆರ್.ವಿ. ದೇಶಪಾಂಡೆ ಅವರು, ದಾಖಲೆಗಳ ಪ್ರದರ್ಶನವನ್ನು 26ರಂದು ಬೆಳಗ್ಗೆ ಕಾರವಾರದ ಗುರುಭವನದಲ್ಲಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10.30ರಿಂದ ಸಂಜೆ 6-30ರ ವರೆಗೆ ಈ ದಾಖಲೆಗಳು ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
Comments
Story first published: Wednesday, January 24, 2001, 5:30 [IST]