ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾಬಸ್ಪೇಟೆ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸತ್ತವರಿವರು
ಬೆಂಗಳೂರು : ಡಾಬಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಲನಕೋಟೆಯ ಹನುಮಂತಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸತ್ತ 7 ಮಂದಿಯನ್ನು ಗುರ್ತಿಸಲಾಗಿದೆ. ಸತ್ತ 7 ಜನರಲ್ಲಿ 5 ಮಂದಿ ಲಾಯರ್ಗಳು, ಓರ್ವ ಕಂಪ್ಯೂಟರ್ ಇಂಜಿನಿಯರ್ ಹಾಗೂ ಸುಮೋ ಚಾಲಕ ಸೇರಿದ್ದಾರೆ.
ಸಾವಿಗೀಡಾದ ಏಳು ಮಂದಿಯೂ ತುಮಕೂರಿನವರು. ಅವರು ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಸಾವಿಗೀಡಾದವರು ಪ್ರಯಾಣಿಸುತ್ತಿದ್ದ ಟಾಟಾ ಸುಮೋಕ್ಕೆ ಮಹಾರಾಷ್ಟ್ರಕ್ಕೆ ಸೇರಿದ ಐಸ್ಕ್ರೀಂ ಸಾಗಾಣಿಕೆಯ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಮೃತಪಟ್ಟವರು - ಚಾರ್ಲಿ ಬೇಕರ್ ಜೇಮ್ಸ್ (30), ಮಾರುತಿ ಪ್ರಸಾದ್(32), ಲೋಕೇಶ್ ಗಾಂಧಿ(36), ಕೃಷ್ಣಮೂರ್ತಿ (37), ಡಿ.ಎಸ್. ಪ್ರವೀಣ್ ಕುಮಾರ್(31) ಹಾಗೂ ಅವರ ಭಾವಮೈದುನ ಕಂಪ್ಯೂಟರ್ ಇಂಜಿನಿಯರ್ ಲೋಕೇಶ್ (31) ಹಾಗೂ ಸುಮೋ ಚಾಲಕ ಸಾದಿಕ್ ಹುಸೇನ್ (31).
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, January 24, 2001, 5:30 [IST]