ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಯೋಧ್ಯೆ ಚರ್ಚೆಗೆ ಮುಸ್ಲಿಂ ನಾಯಕರಿಗೆ ಪೇಜಾವರ ಶ್ರೀ ಆಹ್ವಾನ
ಉಡುಪಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಚರ್ಚಿಸಲು ಮುಸ್ಲಿಮ್ ಜನಾಂಗದ ಪ್ರತಿನಿಧಿಯಾಗಿ ಸೈಯ್ಯದ್ ಶಹಾಬುದ್ದೀನ್ ಅವರನ್ನು ರಾಮ ಜನ್ಮ ಭೂಮಿ ಟ್ರಸ್ಟ್ನ ಧರ್ಮದರ್ಶಿಗಳಲ್ಲಿ ಒಬ್ಬರಾದ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಆಹ್ವಾನಿಸಿದ್ದಾರೆ.
ಎಲ್ಲ ಧರ್ಮಾಚಾರ್ಯರೂ ರಾಮಮಂದಿರವನ್ನು ಅಯೋಧ್ಯೆಯಲ್ಲಿಯೇ ಕಟ್ಟಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆಗಾಗಿ ಮುಸ್ಲಿಂ ನಾಯಕರನ್ನು ಉಡುಪಿಗೆ ಆಹ್ವಾನಿಸಿ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಪೇಜಾವರ ಶ್ರೀಗಳು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಸರಕಾರವೇ ವಿವಿಧ ಕೋಮುಗಳ ನಾಯಕರ ನಡುವೆ ಆರೋಗ್ಯಕರ ಚರ್ಚೆಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದ ಸ್ವಾಮೀಜಿಗಳು ವಾಜಪೇಯಿ ಅವರೊಂದಿಗೆ ರಾಮ ಮಂದಿರ ನಿರ್ಮಾಣ ಕುರಿತಂತೆ ತಾವು ಯಾವ ವಿಷಯವನ್ನೂ ಚರ್ಚಿಸಿಲ್ಲ ಎಂದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, January 24, 2001, 5:30 [IST]