ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಹೊಸ ಹೊಳಹಿನ ಹೊರಳಿನಲ್ಲಿದ್ದೀರಿ. ಅದು ನಿಮ್ಮನ್ನು ಎತ್ತ ಒಯ್ದೀತು ಅನ್ನುವುದು ನಿಮ್ಮ ನಿರ್ಧಾರಗಳನ್ನೆ ಅವಲಂಬಿಸಿದೆ. ಅಡಿಯಿಡುವ ಮುನ್ನ ಮುನ್ನೆಚ್ಚರಿಕೆ ಸಾಕಷ್ಟಿರಲಿ.

ವೃಷಭ :ಬೇಸರದ ಮೂಡಿನಲ್ಲಿದ್ದೀರಿ. ಎಲ್ಲರೂ ನಿಮ್ಮನ್ನೇ ದಿಟ್ಟಿಸುತ್ತಿದ್ದಾರೆ. ಈ ಹಂತದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತವೆ.

ಮಿಥುನ : ಖುಷಿಯ ಲಹರಿ ಮುಂದುವರಿಯಲಿದೆ. ಸೃಜನಶೀಲ ಚಟುವಟಿಕೆಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಬಿಟ್ಟೂ ಬಿಡದೆ ಕಾಡುತ್ತಿದ್ದ ದೈಹಿಕ ನೋವುಗಳೆಲ್ಲ ರಜೆಯ ಮೇಲಿವೆ.

ಕಟಕ : ಗೆಲ್ಲಬೇಕೆಂದೆ ಮುನ್ನುಗ್ಗುವ ಸ್ವಭಾವವೆ ನಿಮ್ಮನ್ನು ಈ ದಿನ ಕಾಯಲಿದೆ. ಸಿಗುವ ಯಶಸ್ಸು ಭಾರೀ ಅನ್ನುವಂಥದ್ದಲ್ಲವಾದರೂ ಅದು ಗೆಲುವು ಅನ್ನುವುದೇ ಮುಖ್ಯ. ಧನಲಾಭ ಯೋಗವೂ ಇದೆ.

ಸಿಂಹ : ಕೋರ್ಟ್‌ ವ್ಯವಹಾರಗಳಲ್ಲಿ ತೊಂದರೆ. ಶತ್ರುಭಯ. ಅನಿರೀಕ್ಷಿತ ಪ್ರಯಾಣ. ಏನಪ್ಪಾ ಇದು ಗ್ರಹಚಾರ ಎಂದು ಕಂಗಾಲಾದರೆ ಆರೋಗ್ಯವೂ ಕೈ ಕೊಟ್ಟೀತು. ಇದೆಲ್ಲಾ ತಾತ್ಕಾಲಿಕ.

ಕನ್ಯಾ : ಲಾಟರಿ ಸಟ್ಟಾ ವ್ಯವಹಾರಗಳಲ್ಲಿ ಲಾಭ ಕಾಣುತ್ತೀರಿ. ದೈವಾನುಗ್ರಹ ನಿಮ್ಮ ಮೇಲೆ ಸಂಪೂರ್ಣವಾಗಿದೆ. ಯಾವುದಾದರೂ ಹೊಸ ಉದ್ದಿಮೆಗೆ ಕೈ ಹಾಕುವಂತಿದ್ದರೆ, ಇಂದು ಶುಭ ಮುಹೂರ್ತ.

ತುಲಾ : ಒಳಗಣ್ಣು ಸುಳ್ಳೆಂದು ಬಲವಾಗಿ ನಂಬಿರುವಾಗ ಹೊರಗಣ್ಣಿನ ವಾದವನ್ನೇ ನೆಚ್ಚುವುದರಲ್ಲಿ ಅರ್ಥವೇನೂ ಇಲ್ಲ . ಪ್ರಪಂಚದಲ್ಲಿ ಪರಿಹರಿಸಲಾಗದ್ದು ಯಾವುದೂ ಇಲ್ಲ . ನೀವು ಚಿಂತೆ ಬಿಡಿ.

ವೃಶ್ಚಿಕ : ಯಾರ ಮೇಲಾದರೂ ಮುನಿಸಿಕೊಂಡಿದ್ದೀರಾ? ನಿಮ್ಮ ಶಕ್ತಿ ಅಪವ್ಯಯ ಅಷ್ಟೇ. ಗಳಿಗೆಗೊಂದು ಮಾತನಾಡುವ ಮಿತ್ರರ ಬಗ್ಗೆ ಎಚ್ಚರಿಕೆಯಿಂದಿರಿ.

ಧನಸ್ಸು :ವೃತ್ತಿಯಲ್ಲಿ ಯಶಸ್ಸು ಕಾಣುತ್ತೀರಿ. ಆಫೀಸಿನಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತಿದೆ. ಬಡ್ತಿಯೂ ಹೊಸಿತಿಲಲ್ಲೇ ಕಾಯುತ್ತಿದೆ. ಕುಟುಂಬದಲ್ಲೂ ಬಡ್ತಿ ಪಡೆಯುತ್ತಿದ್ದೀರಿ.

ಮಕರ : ಕನಸಿನಲ್ಲಿ ಹೆಜ್ಜೆ ಹಾಕಿದ್ದು ಸಾಕು. ನೀವೀಗ ಸರಸ್ವತಿಯಾಗುವ ಹೊತ್ತಾದ್ದರಿಂದ ಎಲ್ಲಾ ಭ್ರಮೆಗಳನ್ನು ಹರಿದುಕೊಳ್ಳಲೇಬೇಕು. ಖುಷಿಯ ದಿನ, ಖುಷಿಯಾಗಿರಿ.

ಕುಂಭ : ಕೌಟುಂಬಿಕ ವ್ಯವಹಾರಗಳ ಬಗ್ಗೆ ನಿಗಾ ವಹಿಸಿ. ನಮ್ಮನ್ನು ನಿರ್ಲಕ್ಷಿಸಿದ್ದಾರೆ ಅನ್ನುವ ಗುಮಾನಿ ಅವರಲ್ಲಿ ಬಾರದಂತೆ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವುದು ಉತ್ತಮ.

ಮೀನ : ಆರೋಗ್ಯ ಕೈ ಕೊಡುತ್ತಿದೆ. ಮಾನಸಿಕವಾಗಿಯೂ ಅಸ್ವಸ್ಥರಾಗಿದ್ದೀರಿ. ಇದಕ್ಕೆಲ್ಲ ನಿಮ್ಮ ಚಿತ್ತ ಚಾಂಚಲ್ಯವೇ ಕಾರಣ. ದೇಹವೇ ದೇಗುಲ ಅನ್ನುವುದು ನಿಮಗೆ ಅನ್ವಯಿಸುವಂಥದ್ದಲ್ಲ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X