ಹುಬ್ಬಳ್ಳಿಯಲ್ಲಿ ಮನೆ ದರೋಡೆ, ಭದ್ರಾವತಿ ಬಸ್ನಲ್ಲಿ ಕಪಟ ನಾಟಕ
ಹುಬ್ಬಳ್ಳಿ : ಮಂಗಳವಾರ ನಸುಕಿನಲ್ಲಿ ಹುಬ್ಬಳ್ಳಿಯ ಮನೆಯಾಂದರ ಮೆಲೆ ದಾಳಿ ಮಾಡಿದ ದುಷ್ಕರ್ಮಿಗಳ ತಂಡ ಮನೆವಾಸಿಗಳನ್ನು ಗಾಯಗೊಳಿಸಿ ನಗನಾಣ್ಯ ಲೂಟಿ ಹೊಡೆದಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇದ್ದರು, ದುರುಳರು ಅವರ ಕಿವಿಯ ಮೇಲೆ ಹೊಡೆದರು. ಆಗ ಅವರಿಬ್ಬರೂ ಪ್ರಜ್ಞೆ ತಪ್ಪಿ ಬಿದ್ದರು. ಪುಂಡರು ಏಳು ತೊಲ ಬಂಗಾರ ಹಾಗೂ 25 ಸಾವಿರ ರೂಪಾಯಿಗಳನ್ನು ಕೊಳ್ಳೆ ಹೊಡೆದು ಕತ್ತಲಲ್ಲಿ ಪರಾರಿ ಆದರು.
ಪ್ರಜ್ಞೆ ಬಂದ ನಂತರ ಹಲ್ಲೆಗೆ ಗುರಿಯಾಗಿದ್ದ ನಾರಾಯಣ್ ಮುಂಜಾನೆ 4 ಗಂಟೆಗೆ ಪೊಲೀಸ್ಠಾಣೆಗೆ ಬಂದು ಘಟನೆ ವಿವರಿಸಿದರು ಎಂದು ಡಿಎಸ್ಪಿ ಸುರೇಶ್ ಯುಎನ್ಐ ವಾರ್ತಾ ಸಂಸ್ಥೆಯ ಪ್ರತಿನಿಧಿಗೆ ತಿಳಿಸಿದರು. ಡಾಗ್ ಸ್ಕ್ವಾಡ್ ಕರೆಸಿ ಪತ್ತೆ ಹಚ್ಚಲು ಪ್ರಯತ್ನ ನಡೆಸಲಾಯಿತು. ಆದರೆ ಪ್ರಯೋಜನವಾಗಿಲ್ಲ. ಈ ಘಟನೆ ದೋಚಿಕೊಂಡು ಹೋಗುವ ಕಳ್ಳರ ಕಾಟವೋ ಅಥವಾ ನುಗ್ಗಿ, ಹಲ್ಲೆ ಮಾಡಿ ದರೋಡೆ ಮಾಡುವ ತಂಡದವರ ಕೈವಾಡವೋ ? ಪತ್ತೆ ಆಗಬೇಕು ಎಂದು ಪೋಲೀಸರು ಹೇಳಿದ್ದಾರೆ.
ಅಮಾಯಕರು ಕೊಡುವ ಟೀ ಕುಡಿಯಬಾರದು : ಹುಬ್ಬಳ್ಳಿಯಿಂದ ಭದ್ರಾವತಿಗೆ ಹೊರಟಿದ್ದ ಬಸ್ನಲ್ಲಿ ಕಣ್ಣಿಗೆ ಮಣ್ಣೆರಚಿ ಹಣದೋಚಿದ ಘಟನೆ ವರದಿ ಆಗಿದೆ. ಮಾರ್ಗ ಮಧ್ಯದಲ್ಲಿ ಬಸ್ ಕಾಫಿಗೆ ನಿಂತಾಗ ಒಬ್ಬಾತ ಸಹಪ್ರಯಾಣಿಕನಿಗೆ ಟೀ ತಂದು ಕೊಟ್ಟ. ಆದರಲ್ಲಿ ಪ್ರಜ್ಞೆ ತ್ಪಪ್ಪಿಸುವ ಪದಾರ್ಥವನ್ನು ಬೆರಸಿದ್ದ. ಆ ಟೀ ಕುಡಿದ, ಇಂತಹ ವಂಚನೆಯನರಿಯದ ವ್ಯಕ್ತಿ ನಿಸ್ತೇಜನಾದಾಗ ಫಟಿಂಗ ಆತನ ಸಾಮಾನು ಸರಂಜಾಮುಗಳನ್ನು ಲಪಟಾಯಿಸಿದ.
(ಯುಎನ್ಐ)