ಫೆಬ್ರವರಿಯಿಂದ ಬೆಂಗಳೂರು- ಮೈಸೂರುಕಾರಿಡಾರ್ ಕೆಲಸ ಆರಂಭ
ಬೆಂಗಳೂರು : ಮುಂದಿನ ತಿಂಗಳಿನಿಂದ ಬೆಂಗಳೂರು- ಮೈಸೂರು ನಡುವಿನ ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿ ಆರಂಭವಾಗಲಿದೆ ಎಂದು ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.
ಅವರು ಸೋಮವಾರ ಶಿವಾಜಿ ನಗರ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈಗಿರುವ ಹೆದ್ದಾರಿಯನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗುತ್ತಿದ್ದು, ಕಾರಿಡಾರ್ ಕಾಮಗಾರಿಯನ್ನು ಬೆಂಗಳೂರು ಮತ್ತು ಮಂಡ್ಯದಲ್ಲಿ ಏಕ ಕಾಲಕ್ಕೆ ಆರಂಭಿಸಬೇಕೆಂಬ ಷರತ್ತಿನ ಪ್ರಕಾರ ಕೆಲಸ ಆರಂಭಿಸಲಾಗುವುದು.
ಕಾರಿಡಾರ್ನಲ್ಲಿ ಸುಂಕ ನೀಡಲು ಶಕ್ತರಾದವರು ಮಾತ್ರ ಪ್ರಯಾಣಿಸಬಹುದು. ಶ್ರೀ ಸಾಮಾನ್ಯರಿಗೆ ಇದು ಕಷ್ಟ ಸಾಧ್ಯವಾದ್ದರಿಂದ, ಎಲ್ಲರಿಗೂ ಅನುಕೂಲವಾಗುವಂತೆ ಈಗಿರುವ ಬೆಂಗಳೂರು -ಮೈಸೂರು ರಸ್ತೆಯನ್ನು ಅಗಲಗೊಳಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರ ಬಸ್ ನಿಲ್ದಾಣದ ಸುತ್ತ ಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣದ ಬದಲಾಗಿ ಕಾಂಕ್ರೀಟ್ ಹಾಕಲು ತೀರ್ಮಾನಿಸಲಾಗಿದೆ ಎಂದ ಕೃಷ್ಣ 15ರಿಂದ 20 ವರ್ಷ ಬಾಳಿಕೆ ಬರುವಂತೆ, ಉತ್ತಮ ಗುಣಮಟ್ಟದ ಕಾಂಕ್ರೀಟ್ ಹಾಕುವಂತೆ ಪಾಲಿಕೆ ಅಧಿಕಾರಿಗಳಿಗೆ ಆದೇಶ ನೀಡಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...