ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆಲಮಂಗಲ ಬಳಿ ರಸ್ತೆ ಅಪಘಾತ, ತುಮಕೂರಿನ 7 ಮಂದಿ ಹತ
ಬೆಂಗಳೂರು : ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಏಳು ಮಂದಿಯೂ ತುಮಕೂರಿನವರಾಗಿದ್ದು ಅವರಲ್ಲಿ ಐವರು ವಕೀಲರು, ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಇನ್ನೊಬ್ಬ ಚಾಲಕ. ತೀವ್ರವಾಗಿ ಪೆಟ್ಟು ತಿಂದಿರುವ ಇನ್ನೊಬ್ಬ ವಕೀಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ನೆಲಮಂಗಲ ಸಮೀಪದ ಕುಲುವನಹಳ್ಳಿಯ ಬಳಿ ಅಪಘಾತ ಸಂಭವಿಸಿತು. ಟಾಟಾ ಸುಮೋ ಎದುರಿನಿಂದ ವೇಗವಾಗಿ ಧಾವಿಸುತ್ತಿದ್ದ ಲಾರಿಗೆ ಬಡಿದು ದುರಂತ ಸಂಭವಿಸಿತು. ಮೃತರಾದ ದುರ್ದೈವಿಗಳು ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
Comments
Story first published: Wednesday, January 24, 2001, 5:30 [IST]