ರೋಮಾಂಚನಗೊಳಿಸಿದ ಸಾಕು ನಾಯಿಗಳ ನೋಟ - ಆಟ
ಬೆಂಗಳೂರು: ನಿಯತ್ತಿನ ಪ್ರಾಣಿ ನಾಯಿಯಲ್ಲೂ ನೂರೆಂಟು ಬಗೆ. ವಿವಿಧ ಆಕಾರ. ಭಾನುವಾರ ನಗರದಲ್ಲಿ ನಾನಾ ತಳಿಗಳ ನಾಯಿಗಳು ಒಂದೆಡೆ ಸೇರಿದ್ದವು. ವಿವಿಧ ಜಾತಿಯ ನಾಯಿಗಳ ನೋಟ - ಆಟವನ್ನು ಕಣ್ಣಾರೆ ಕಂಡು ಪ್ರೇಕ್ಷಕರು ನಿಬ್ಬೆರಗಾದರು.
ನಗರದ ಹೆಬ್ಬಾಳದ ಪಶುವೈದ್ಯ ಕಾಲೇಜ್ ಆವರಣದಲ್ಲಿ ಮೈಸೂರು ಕೆನಲ್ ಕ್ಲಬ್ ಆಯೋಜಿಸಿದ್ದ 74 ಮತ್ತು 75ನೇ ಅಖಿಲ ಭಾರತ ಮುದ್ದು ನಾಯಿಗಳ ಮಾಂತ್ರಿಕ ಪ್ರದರ್ಶನದಲ್ಲಿ ನಾಯಿಗಳ ವಿವಿಧ ಚಾತುರ್ಯ ಕಂಡ ಪ್ರೇಕ್ಷಕರ ರೋಮಾಂಚನ ಹೇಳತೀರದಾಗಿತ್ತು. ಕೊರೆಯುವ ಮಾಗಿಯ ಚಳಿಯಲ್ಲೂ ಮೈ ಜುಮ್ಮೆನ್ನುವಂತಹ ಅಪೂರ್ವ ಕ್ಷಣ.
ತಮ್ಮ ಮಾಲಿಕರೊಂದಿಗೆ ದೂರ ದೂರದ ಊರುಗಳಿಂದ ಬಂದ ನಾಯಿಗಳು, ನಗರದ ನಾಯಿಗಳಿಗೆ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಕಲಿತ ವಿದ್ಯೆಯನ್ನೆಲ್ಲಾ ಪ್ರದರ್ಶಿಸಿದವು. ಚಿರತೆಯಂತೆ ಮೈಯೆಲ್ಲಾ ಚಿತ್ತಾರ ಮೂಡಿಸಿಕೊಂಡ ನಾಯಿ ತನ್ನ ಎತ್ತರದ ನಿಲುವಲ್ಲಿ ನಿಂತಿದ್ದರೆ, ಎಲ್ಲರನ್ನೂ ಆಕರ್ಷಿಸುವ ಶ್ವೇತ ಸುಂದರಿಯಂತೆ ಕುತ್ತಿಗೆಗೆ ಕೆಂಪು ರಿಬ್ಬನ್ ತೊಟ್ಟ ಬಿಳಿಯ ಜೂಲು ನಾಯಿ ಮರಿ ತನ್ನ ಪುಟ್ಟ ಬಾಲವನ್ನು ಅಲ್ಲಾಡಿಸುತ್ತಿತ್ತು.
ಮೊಲದ ತದ್ರೂಪಿ ಎನ್ನುವಂತಿದ್ದ ಪುಟ್ಟ ನಾಯಿ ಮರಿ, ಉದ್ದ ಕೂದಲಿನ ಕೆಂಪು ಮೂತಿಯ ನಾಯಿ ತನ್ನ ಮಾಲಿಕನಿಗೆ ಪೇಪರ್ ತಂದುಕೊಡುವ, ಎಸೆದ ಬಾಲನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಒಡೆಯನ ಬಳಿಗೆ ಓಡಿ ಬರುವ ಕಾಯಕದಲ್ಲಿ ನಿರತವಾಗಿತ್ತು. ಮುಧೋಳದ ಎತ್ತರದ ಭೇಟಿ ನಾಯಿ, ಪೇಟ ಸುತ್ತಿಕೊಂಡು ಬಂದು ಕುಳಿತಿದ್ದ ಉತ್ತರ ಕರ್ನಾಟಕದ ತನ್ನ ಒಡೆಯನ ಆಣತಿಗೆ ಕಾಯುತ್ತಿತ್ತು.
ಚಿರತೆಯ ತದ್ರೂಪಿಯಂತೆ ತೋರುತ್ತಿದ್ದ ಗ್ರೇಟ್ಡೆನ್ ಅಲ್ಕ್ಯೂನ್ ರಿಂಗ್ನಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಹಾರುತ್ತ ತನ್ನ ಚಾತುರ್ಯ ಪ್ರದರ್ಶನ ತೋರುತ್ತಿತ್ತು. ಒಟ್ಟು ಹದಿನಾಲ್ಕು ವರ್ಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ನಲವತ್ತಕ್ಕೂ ಹೆಚ್ಚು ತಳಿಗಳ ಒಟ್ಟು 345 ನಾಯಿಗಳು ಈ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಬುಲ್ಡಾಗ್, ಸ್ಯಾಜೋಯಾರಂ, ಸೆಟ್ ಬಾರ್ನಾಡ್, ನೆಪೋಲಿಯನ್ ಮಾಷಿಸ್, ಗ್ರೇಟ್ಡೆನ್ ಅಲ್ಕ್ಯೂನ್, ಮೈನರ್ ಪಪ್ಪಿಯೇ ಮೊದಲಾದ ಪುಟ್ಟ ನಾಯಿಗಳಿಂದ ಹಿಡಿದು ಆಳೆತ್ತರದ ದೊಡ್ಡ ನಾಯಿಗಳು ಪ್ರೇಕ್ಷಕರ ಮೈ ನವಿರೇಳಿಸಿದವು. ಈ ಮಧ್ಯೆ ನಾಯಿಗಳ ಕೊರಳ ಪಟ್ಟಿ, ಚೈನ್ ಹಾಗೂ ಆಕರ್ಷಕ ನಾಯಿಮರಿಗಳ ಮಾರಾಟ ಪ್ರದರ್ಶನದ ಅಂಗಳದ ಅಂಚಿನಲ್ಲಿ ಭರದಿಂದ ಸಾಗಿತ್ತು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications