ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀಡಿ ಉದ್ಯಮ ಉಳಿವಿಗೆ ಒತ್ತಾಯಿಸಿ ಫೆ. 15ಕ್ಕೆ ಧರಣಿ- ಮೆರವಣಿಗೆ
ಮಂಗಳೂರು : ನಲುಗುತ್ತಿರುವ ಬೀಡಿ ಉದ್ಯಮ ಉಳಿಸಿ, 75 ಲಕ್ಷ ಬೀಡಿ ಕಾರ್ಮಿಕರ ಭವಿತವ್ಯ ಕಾಪಾಡುವ ಠರಾವಿನೊಂದಿಗೆ ಐಟಕ್ ಸಂಯೋಜಿಸಿದ್ದ 3 ದಿನಗಳ ಕಾಲದ ಅಖಿಲ ಭಾರತ ಬೀಡಿ, ಸಿಗರೇಟು, ತಂಬಾಕು ಕಾರ್ಮಿಕರ ಒಕ್ಕೂಟದ 8ನೇ ಸಮ್ಮೇಳನ ಭಾನುವಾರ ಮುಕ್ತಾಯವಾಯಿತು.
ಸಮ್ಮೇಳನದಲ್ಲಿ ಕಾರ್ಮಿಕರ ಒಕ್ಕೂಟ ಹಾಗೂ ಬೀಡಿ ಉದ್ದಿಮೆದಾರರ ಜಂಟಿ ಸಂಘಟನೆ ಕೈಗೊಂಡಿರುವ ನಿರ್ಧಾರಗಳು ಇಂತಿವೆ :
- ಬೀಡಿ ಉದ್ಯಮದ ಉಳಿವಿಗಾಗಿ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಾಯಿಸಲು ಒತ್ತಡ ಹೇರುವುದು
- ಬೀಡಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಮಾನ ಕನಿಷ್ಠ ವೇತನ ಜಾರಿಗೆ ತರಬೇಕು
- ತಿಂಗಳಲ್ಲಿ 26 ದಿನಗಳೂ ಕಾರ್ಮಿಕರು ಕೆಲಸ ಮಾಡಲು ಅನುವಾಗುವಂತೆ ಕಚ್ಚಾ ಸಾಮಗ್ರಿ ಒದಗಿಸಬೇಕು
- ಜಾಗತೀಕರಣದ ಫಲವಾಗಿ ಮಾಲೀಕರ ಪರವಾದ ಸರ್ಕಾರದ ನೀತಿಗಳ ವಿರುದ್ಧ ದನಿಯೆತ್ತಲು ಮುಖ್ಯ ವಾಹಿನಿ ಒಕ್ಕೂಟಗಳ ಜೊತೆ ಬೀಡಿ ಕಾರ್ಮಿಕರ ಒಕ್ಕೂಟ ಕೈಜೋಡಿಸಬೇಕು
- ಸಮ್ಮೇಳನದಲ್ಲಿ ಕೈಗೊಳ್ಳಲಾಗಿರುವ ನಿರ್ಧಾರಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 15ರಂದು ಧರಣಿ, ಪ್ರತಿಭಟನೆ ನಡೆಸಲಾಗುವುದು
- ಬೀಡಿ ಕಾರ್ಮಿಕರ ಸಂಘಟನೆಯನ್ನು ಬಲಪಡಿಸಲು ಹಾಗೂ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು 101 ಸದಸ್ಯರ ಸಾಮಾನ್ಯ ಸಮಿತಿ, 33 ಜನರ ಕಾರ್ಯಕಾರಿ ಸಮಿತಿ ಹಾಗೂ 15 ಜನ ಪದಾಧಿಕಾರಿಗಳನ್ನು ಸಮ್ಮೇಳನದಲ್ಲಿ ಚುನಾಯಿಸಲಾಗಿದೆ
(ಇನ್ಫೋ ವಾರ್ತೆ)
Story first published: Wednesday, January 24, 2001, 5:30 [IST]