ನಿಲ್ಲದ ಪೈಪ್ಲೈನ್ ಕಾಮಗಾರಿ 5 ಸಾವಿರ ಮರಗಳ ಬಲಿ
* ರಾಜು ಮಹತಿ
ಬೆಳ್ತಂಗಡಿ : ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಎಂಆರ್ಪಿಎಲ್ನ ಪೈಪ್ಲೈನ್ ಅಳವಡಿಕೆಯ ಕಾಮಗಾರಿಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಮೊನ್ನಿನ ಉಡುಪಿ ಭೇಟಿಯ ಸಂದರ್ಭದಲ್ಲಿ ಪ್ರಧಾನಿಗಳನ್ನು ಒತ್ತಾಯಿಸಿದ್ದರು. ಈ ಯೋಜನೆಗೆ ವಿರೋಧ ಮುಂಚಿನಿಂದ ಇತ್ತಾದರೂ, ಅದು ಲೋಕದ ಗಮನ ಸೆಳೆದದ್ದು ಸ್ವಾಮೀಜಿ ಅವರು ತಮ್ಮ ಪ್ರತಿಭಟನೆಯನ್ನು ವಾಜಪೇಯಿ ಅವರಲ್ಲಿ ತೋಡಿಕೊಂಡಾಗಲೇ. ಆದರೆ, ಈ ಯೋಜನೆಯಿಂದ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಅನ್ನುವ ವಿವರಗಳು ಹೆಚ್ಚಿನ ಜನಕ್ಕೆ ಗೊತ್ತಿಲ್ಲ . ಈ ಬಗೆಗಿನ ವಿವರಗಳು ಇಲ್ಲಿವೆ.
ಎಂಆರ್ಪಿಎಲ್ನಿಂದ ಬೆಂಗಳೂರಿಗೆ ತೈಲೋತ್ಪನ್ನಗಳನ್ನು ಸಾಗಿಸಲು ಪೆಟ್ರೋಲ್ನ ಕೊಳವೆ ಮಾರ್ಗ ಕಾಮಗಾರಿ ಪಶ್ಚಿಮ ಘಟ್ಟಗಳಲ್ಲಿ ಪರಿಸರವಾದಿಗಳ ವಿರೋಧದ ನಡುವೆಯೂ ಬಿರುಸಿನಿಂದ ನಡೆಯುತ್ತಿದೆ.
ಇದಕ್ಕಾಗಿ ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದ ಒಟ್ಟು 5000 ಮರಗಳನ್ನು ಉರುಳಿಸಲು ಗುರುತು ಹಾಕಲಾಗಿದೆ.
ಕೆಲವನ್ನು ಬುಲ್ಡೋಜರ್ಗಳು ಈಗಾಗಲೇ ಉರುಳಿಸಿವೆ. ಇದರಲ್ಲಿ 2,500 ಮರಗಳು ರಕ್ಷಿತಾರಣ್ಯ ಪ್ರದೇಶದಲ್ಲಿವೆ.
ಪೈಪ್ಲೈನ್ಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಉಜಿರೆ ಬಳಿ ಲಾರಿಗಟ್ಟಲೆ ಪೈಪುಗಳು ಆರು ಎಕರೆ ಪ್ರದೇಶದಲ್ಲಿ ಜಮಾವಣೆಯಾಗತೊಡಗಿದ್ದವು. ಈಗ ಅವುಗಳನ್ನು ಪಶ್ಚಿಮ ಘಟ್ಟಗಳ ಎದೆ ಸೀಳಿ ದುರ್ಗಮ ಪ್ರದೇಶಕ್ಕೆ ಒಯ್ಯಲಾಗುತ್ತಿದೆ. ಬೃಹತ್ ವಾಹನಗಳು ಸಾಗಲು ಅನುಕೂಲವಾಗುವಂತೆ 100 ಅಡಿಯಷ್ಟು ಕಚ್ಚಾ ರಸ್ತೆಯನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗುತ್ತಿದೆ. ಅಪರೂಪದ ಬಿದಿರುಗಳನ್ನು ಯದ್ವಾ ತದ್ವಾ ಉರುಳಿಸಲಾಗಿದೆ. ಬುಲ್ಡೋಜರ್ಗಳು ಪೈಪ್ಗಾಗಿ ಗುಂಡಿ ತೋಡುವ ಕೆಲಸವನ್ನು ಆರಂಭಿಸಿವೆ. ಪ್ರತಿಭಟನೆಯನ್ನು ತಡೆಯಲು ಪೊಲೀಸ್ ನೆರವು ಪಡೆಯಲಾಗಿದೆ.
ಕಾಡು ಕಡಿಯುವುದು ನಿಲ್ಲಿಸಿ : ಅರಣ್ಯ ನಾಶ ನಿಲ್ಲಿಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲ್ಲೂಕು ಪರಿಸರ ಜಾಗೃತಿ ಒಕ್ಕೂಟ ಎಚ್ಪಿಸಿಎಲ್ ಪೈಪ್ ಲೈನ್ ವಿರೋಧಿ ಸಮಿತಿ, ದ.ಕ. ಪರಿಸರಾಸಕ್ತ ಕೃಷಿಕರ ವೇದಿಕೆ, ಬೆಳ್ತಂಗಡಿ ತಾಲ್ಲೂಕು ಮಹಿಳಾ ಜಾಗೃತಿ ವೇದಿಕೆ, ನಾಗರಿಕ ಸೇವಾ ಟ್ರಸ್ಟ್, ದಲಿತ ಅಬಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ , ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದೆ. ಸೋಮನಾಥ್ ನಾಯಕ್, ಶಂಪಾ ದೈತೋಟ, ಲಕ್ಷೀಶ ತೋಳ್ಪಾಡಿ, ಇಸುಬು ಬ್ಯಾರಿ ಮತ್ತಿತರ ಪರಿಸರವಾದಿಗಳು ಪೈಪ್ಲೈನ್ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೆಲ್ಲಾ ನಡೆಯುತ್ತಿದ್ದಾಗಲೂ ಅರಣ್ಯ ನಾಶ ಮುಂದುವರೆದಿದೆ. ಬೃಹತ್ ಗಾತ್ರದ ಪೈಪ್ಗಳನ್ನು ಕ್ಯಾಟರ್ ಪಿಲ್ಲರ್ ಯಂತ್ರಗಳು ಏರಿಸಿ ಇಳಿಸುತ್ತಿವೆ. ಅಡ್ಡ ಬಂದ ಗುಡ್ಡಗಳನ್ನು ಕಡಿದು ಹಾಕಲಾಗುತ್ತಿದೆ. ಕಾಮಗಾರಿಯ ಗುತ್ತಿಗೆ ಹಿಡಿದವರು ಬೆಳ್ತಂಗಡಿಯ ನೆರಿಯ ಗ್ರಾಮದಲ್ಲಿ ಸುಸಜ್ಜಿತ ಕಟ್ಟಡ ಸಂಕೀರ್ಣ ನಿರ್ಮಿಸುತ್ತಿದ್ದಾರೆ.
ಈ ಪೈಪ್ಲೈನ್ ಕಾಮಗಾರಿಗಾಗಿ ಮೊದಲು ವಿರೋಧ ವ್ಯಕ್ತಪಡಿಸುತ್ತಿದ್ದ ರಾಜಕೀಯ ಮುಖಂಡರು ಈಗ ತುಟಿ ಬಿಚ್ಚುತ್ತಿಲ್ಲ. ಈ ಪೈಪ್ಲೈನ್ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಹೀಗೆ 7 ಜಲ್ಲೆಗಳ 17 ತಾಲ್ಲೂಕುಗಳ 243 ಹಳ್ಳಿಗಳಲ್ಲಿ ಹಾದು ಹೋಗುತ್ತದೆ. 18 ಮೀಟರ್ ಅಗಲದ ಹಾದಿಯಲ್ಲಿ ಒಂದು ಮೀಟರ್ ಆಳದಲ್ಲಿ ಎರಡು ಅಡಿ ವ್ಯಾಸದ ಪೈಪ್ಗಳನ್ನು ಹುಗಿಯಲಾಗುತ್ತದೆ. ಈ ಪ್ರಸ್ತಾವಿತ ಕೊಳವೆ ಮಾರ್ಗದ ಉದ್ದ 376 ಕಿ.ಮೀ. ಇದಕ್ಕೆ ಭಾರತ ಸರಕಾರ ಅಪ್ಪಣೆ ಕೊಡಿಸಿದ ಅಧಿಸೂಚನೆ ಕಳೆದ ಜೂನ್ 16ರಂದು ಪ್ರಕಟವಾಗಿದೆ. ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕುಗಳ 23 ಗ್ರಾ ಮ ಪಂಚಾಯತ್ಗಳು ಪೈಪ್ಲೈನ್ ವಿರೋಧಿಸಿ ನಿರ್ಣಯ ಕೈಗೊಂಡಿವೆ. ಇದನ್ನು ಸರಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎನ್ನುವುದಕ್ಕೆ ಮುಂದುವರೆಯುತ್ತಿರುವ ಕಾಮಗಾರಿಯೇ ಸಾಕ್ಷಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications