Get Updates
Get notified of breaking news, exclusive insights, and must-see stories!

ನರಹಂತಕನ ತಲೆಗೆ 20 ಲಕ್ಷ : --ಭೇದೋಪಾಯದ -ತಿ-ರುವಿನಲ್ಲಿ -ಶಿಕಾ-ರಿ

ಚಾಮರಾಜನಗರ : ನರಹಂತಕ ವೀರಪ್ಪನ್‌ ತಲೆಗೆ 20 ಲಕ್ಷ ರೂಪಾಯಿ ಹಾಗೂ ಆತನ ಬಲಗೈ ಬಂಟರಾದ ಸೇತುಕುಳಿ ಗೋವಿಂದನ್‌ ಮತ್ತು ಚಿಕ್ಕರಸನ ಪಾಳ್ಯದ ಚಂದ್ರನ್‌ ಅವರ ತಲೆಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಕರ್ನಾಟಕ ಮತ್ತು ತಮಿಳು ನಾಡು ಸರಕಾರಗಳು ಘೋಷಿಸಿವೆ.

ಬಹುಮಾನದ ವಿವರಗಳಿರುವ ಕರಪತ್ರವನ್ನು ವೀರಪ್ಪನ್‌ ಕಾರ್ಯಕ್ಷೇತ್ರದಡಿ ಬರುವ ಕೂಡ್ಲೂರು, ನಲ್ಲೂರು, ಹೂಗ್ಯ, ಜಲ್ಲಿ ಪಾಳ್ಯ ಗ್ರಾಮಗಳಲ್ಲಿ ವಿತರಿಸಲಾಗುತ್ತಿದೆ. ವೀರಪ್ಪನ್‌ ಕಾರ್ಯಪಡೆಯ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ವೀರಪ್ಪನ್‌ ಬಗ್ಗೆ ಮಾಹಿತಿ ಒದಗಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರಸ್ತುತ 122ಕ್ಕೂ ಹೆಚ್ಚು ನರಹತ್ಯೆ, ಎರಡು ಸಾವಿರ ಆನೆಗಳ ದಂತ ಕಳವು, ಸಾವಿರಾರು ಟನ್‌ ಶ್ರೀಗಂಧ ಕಳ್ಳಸಾಗಾಣಿಕೆಯ ಆರೋಪಗಳು ವೀರಪ್ಪನ್‌ ವಿರುದ್ಧ ದಾಖಲಾಗಿವೆ. ವೀರಪ್ಪನ್‌ ತಂಡಕ್ಕೆ ಆಹಾರ ಸಾಗಿಸುವುದು, ಸಂಪರ್ಕಿಸುವುದು ಮತ್ತು ಮಾಹಿತಿ ಗೊತ್ತಿದ್ದರೂ ತಿಳಿಸದೇ ಇರುವುದು ಅಪರಾಧವಾಗುತ್ತದೆ ಎಂದು ಜನರನ್ನು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಹಿಂದೆ ಶಂಕರ್‌ ಬಿದರಿ ನೇತೃತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಸರಕಾರ, ವೀರಪ್ಪನ್‌ ತಲೆಗೆ 40 ಲಕ್ಷ ಮತ್ತು ಆತನ ಸಹಚರರಿಬ್ಬರ ತಲೆಗ 20 ಲಕ್ಷ ರೂಪಾಯಿ ಘೋಷಿಸಿತ್ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+