ಕೈಗೆ ಬಂದ ತುತ್ತು ಬಾಯಿ-ಗಿ-ಲ್ಲ : --ವಿ-ಷ ಕುಡಿ-ದು ಸತ್ತ ಸು-ತ-ಗ-ಟ್ಟಿ ರೈತ
ಸುತ-ಗ-ಟ್ಟಿ : ಆಲೂಗಡ್ಡೆ ಬೆಲೆ ಕುಸಿತದಿಂದ ಸಾಲ ತೀರಿಸಲಾಗದೇ ರೋಸಿ ಹೋದ ರೈತ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ -ಹು-ಬ್ಬ-ಳ್ಳಿ ಜಿಲ್ಲೆ-ಯ ಸುತಗಟ್ಟಿಯಲ್ಲಿ ನಡೆದಿದೆ.
ಬಸಯ್ಯ ಈರಯ್ಯ ಮೂಕ ಶಿವಯ್ಯನವರು (30) ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಆಲೂಗಡ್ಡೆ, ಮೆಕ್ಕೆ ಜೋಳ, ಹತ್ತಿ ಬೆಳೆಗಳು ಒಂದಿಷ್ಟು ಲಾಭ ತರಲಿಲ್ಲ. ಅಲ್ಲದೆ ಬೆಳೆಗೋಸ್ಕರ ಮಾಡಿರುವ ಸಾಲ ತೀರಿಸುವುದು ದುಸ್ತರವಾದಾಗ, ಸಾಲಭಯದಿಂದ ನೇಣು ಹಾಕಿಕೊಂಡಿದ್ದಾರೆ. ನನ್ನ ಸಾವಿಗೆ ಸಾಲದ ಹೊರೆಯೇ ಕಾರಣ. ಯಾರ ಮೇಲೆಯೂ ಸಂಶಯ ಪಡುವ ಅಗತ್ಯವಿಲ್ಲ ಎಂದು ಚೀಟಿ ಬರೆದಿಟ್ಟಿದ್ದಾರೆ.
ಆಲೂಗಡ್ಡೆ, ಮೆಕ್ಕೆ ಜೋಳ, ಡಿ.ಸಿ.ಎಚ್. ಹತ್ತಿ ಬೆಳೆಗಳು ಬಲಿಯುವ ಹೊತ್ತಿಗೆ ಮಳೆ ಬಂದಿದ್ದ ಕಾರಣ ಪಕ್ಕದ ಹೊಲದಲ್ಲಿ ತಿಂಗಳ ಕಾಲ ನೀರು ನಿಂತಿದ್ದರಿಂದ , ಬೆಳೆಯೆಲ್ಲಾ ಕೊಳೆತು ಹೋಗಿತ್ತು. ಹತ್ತಿಗೆ ರೋಗ ಬಡಿದಿತ್ತು. ಮಾಡಿದ ಸಾಲ ತೀರಿಸುವ ದಾರಿ ಕಾಣದಾದಾಗ ಮೂಕ ಶಿವಯ್ಯನವರು ಅವಮಾನದಿಂದ ಸಾವಿನ ಮೊರೆ ಹೋಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...