ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು : ಕಾರ್ಗಿಲ್ ಯೋಧರ ಕುಟುಂಬಗಳಿಗೆ ಜ.22 ರಂದು ಪರಿಹಾರ
ಮೈಸೂರು : ಕಾರ್ಗಿಲ್ ಯುದ್ಧದಲ್ಲಿ ಜೀವ ತೆತ್ತ ಜಿಲ್ಲೆಯ 11 ಯೋಧರ ಕುಟುಂಬಗಳಿಗೆ ತಲಾ 1 ಲಕ್ಷ ರುಪಾಯಿ ಪರಿಹಾರ ಧನವನ್ನು ವಿತರಿಸುವ ಕಾರ್ಯಕ್ರಮ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜನವರಿ 22 ರಂದು ನಡೆಯುವುದು ಎಂದು ಜಿಲ್ಲಾಧಿಕಾರಿ ಬಸವರಾಜು ತಿಳಿಸಿದ್ದಾರೆ.
ಪರಿಹಾರ ಧನ ವಿತರಿಸಲು ವರನಟ ಡಾ. ರಾಜ್ಕುಮಾರ್ ಒಪ್ಪಿದ್ದಾರೆ ಎಂದು ಗುರುವಾರ ಸನ್ಮಾನ ಹಾಗೂ ಪರಿಹಾರ ಧನ ವಿತರಣಾ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಭಾಧ್ಯಕ್ಷ ಬಸವರಾಜು ಹೇಳಿದರು. ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಯುದ್ಧಗಳಲ್ಲಿ ಮಡಿದ ಜಿಲ್ಲೆಯ 93 ಯೋಧರ ವಿಧವೆಯರಿಗೆ ತಲಾ 10 ಸಾವಿರ ರುಪಾಯಿ ಪರಿಹಾರ ವಿತರಿಸಲಾಗುವುದು. ಕಳೆದ ವರ್ಷ ಮೈಸೂರಿನಲ್ಲಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಹಾಗೂ ಅಧಿಕಾರಿಗಳ ತಂಡದಿಂದ 28 ಲಕ್ಷ ರುಪಾಯಿ ನಿಧಿ ಸಂಗ್ರಹಿಸಲಾಗಿತ್ತು .
(ಇನ್ಫೋ ವಾರ್ತೆ)
Comments
Story first published: Wednesday, January 24, 2001, 5:30 [IST]