ವೇದಾಂತ- ಲೋಕವಿಜ್ಞಾನ ಜೊತೆಜೊತೆಗಿರೆ ಸಾಧನ : ಜೋಶಿ
ಉಡುಪಿ : ವೇದಾಂತಮುಂ ಲೋಕ ವಿಜ್ಞಾನಮುಂ ನಿನ್ನ ಹಾದಿಗೆರಡಂಕೆ, ನಡು ಪಟ್ಟಿಯಲಿ ನಡೆ ನೀಂ.... ಕಗ್ಗ ಕವಿ ಡಿ.ವಿ.ಗುಂಡಪ್ಪನವರ ಮಾತನ್ನು ಕೇಂದ್ರ ಮಾನವ ಸಂಪನ್ಮೂಲ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಮುರಳಿ ಮನೋಹರ ಜೋಶಿ ತಮ್ಮದೇ ಆದ ರೀತಿಯಲ್ಲಿ ಶುಕ್ರವಾರ ನೆನಪಿಸಿದ್ದಾರೆ....
ಸಂದರ್ಭ- ಮಠಾಧಿಪತಿಗಳ ಹಾಗೂ ಸಂತರ ಒಂದು ದಿನದ ಸಮ್ಮೇಳನದ ಉದ್ಘಾಟನೆ. ವಿಜ್ಞಾನ- ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕ ತತ್ತ್ವಗಳ ಸಹಯೋಗ ಮಾನವ ಕಲ್ಯಾಣಕ್ಕೆ ಅತಿ ಮುಖ್ಯ. ಸತ್ಯಾನ್ವೇಷಣೆಯಲ್ಲಿ ವಿಜ್ಞಾನದ ಜೊತೆಗೆ ಆಧ್ಯಾತ್ಮಿಕತೆಯೂ ಅತಿ ಮುಖ್ಯ ಎಂಬುದನ್ನು ಪಾಶ್ಚಿಮಾತ್ಯರೂ ಮನಗಂಡಿದ್ದಾರೆ. ವಸುದೈವ ಕುಟುಂಬಕಮ್ (ಜಗತ್ತೇ ಒಂದು ಕುಟುಂಬ) ಎಂಬುದು ಭಾರತೀಯ ತತ್ವ ಮತ್ತು ಚಿಂತನೆಯಾದರೆ, ಜಗತ್ತು ಒಂದು ಮಾರುಕಟ್ಟೆ. ಅಲ್ಲಿ ಮೆರೆಯಲು ಹಣ ಹಾಗೂ ಅಧಿಕಾರ ಅತಿ ಮುಖ್ಯ ಎನ್ನುವುದು ಪಾಶ್ಚಿಮಾತ್ಯ ಚಿಂತನೆ. ಪಾಶ್ಚಿಮಾತ್ಯ ಚಿಂತನೆಯಲ್ಲಿ ಮಾನವೀಯ ಮೌಲ್ಯಗಳು ನಗಣ್ಯವಾಗಿದ್ದವು. ಆದರೆ ಈಗ ಈ ರಾಷ್ಟ್ರಗಳಿಗೂ ಮೌಲ್ಯಗಳ ಮಹತ್ವದ ಅರಿವಾಗಿದೆ.
ಎಂತೆಂಥದೋ ಇಕ್ಕಟ್ಟಿನ ಸಂದರ್ಭದಲ್ಲಿ ಭಾರತದ ನೆರವಿಗೆ ಬಂದಿರುವುದೇ ನಮ್ಮತನ- ಮೌಲ್ಯಗಳು. ವೇದವ್ಯಾಸರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ಅನೇಕ ಮಹನೀಯರು ಭಾರತವನ್ನು ಆಧ್ಯಾತ್ಮಿಕ ಮೌಲ್ಯದ ಹಾದಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಸಾವಿರಾರು ಜನರನ್ನು ಹುರಿದುಂಬಿಸಿದ್ದಷ್ಟೇ ಅಲ್ಲ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾಭಿಮಾನ, ಆತ್ಮಸಾಕ್ಷಿ, ಆತ್ಮಾಭಿಮಾನ ಹಾಗೂ ಆತ್ಮ ಗೌರವ ಕಾಪಿಟ್ಟುಕೊಳ್ಳಲು ಸಾಧ್ಯವಾಯಿತು.
ಮಠಾಧೀಶರು ಹಾಗೂ ಸಂತರು ಸಮಾಜ ಸುಧಾರಿಸಿರುವ ಅನೇಕ ಉದಾಹರಣೆಗಳಿವೆ. ಬಡ ಬಗ್ಗರಿಗೆ ಊಟ- ವಸತಿ ಒದಗಿಸುವ, ನೀರಿನ ಸಮಸ್ಯೆ ನೀಗುವ, ಕ್ಷಾಮ ಬಂದಲ್ಲಿ ಧರ್ಮ ಕರ್ಮ ಅನ್ನುವ ಧೋರಣೆಯನ್ನು ಈಗಿನ ಸಂತರೂ ತಳೆದಲ್ಲಿ ಕಲ್ಯಾಣ ತಲದ ಮೇಲೆ ವಿಜ್ಞಾನ ಮೆರೆದೀತು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications