ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ

By Staff
|
Google Oneindia Kannada News

ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅವರ ವಿವಾಹ ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಬುಧವಾರ ರಾತ್ರಿ ಇಲ್ಲಿ ನೆರವೇರಿತು. ತುಮಕೂರಿನ ಉದ್ಯಮಿ ಸುರೇಶ್‌ ಬಾಬು ಅವರ ಪುತ್ರ ಎಂಜಿನಿಯರ್‌ ಅಮಿತ್‌ ಅನ್ವಯಿಕ ಮನಃಶಾಸ್ತ್ರ ಪದವೀಧರೆಯಾದ ಶ್ರದ್ಧಾ ಅವರನ್ನು ವರಿಸಿದರು.

ಜಿನ ಸಂಪ್ರದಾಯದ ರೀತ್ಯ ನಡೆದ ಈ ಮದುವೆಯ ಪೌರೋಹಿತ್ಯವನ್ನು ಅಳದಂಗಡಿಯ ಖ್ಯಾತ ಜೈನ ಪುರೋಹಿತರಾದ ಆದಿರಾಜ ಇಂದ್ರ ಹಾಗೂ ಇತರ ಏಳು ಹಿರಿಯ ವಿದ್ವಾಂಸರು ವಹಿಸಿದ್ದರು. ತೀರಾ ಖಾಸಗಿಯಾಗಿ ನಡೆದ ಈ ಮದುವೆಯ ಸಮಾರಂಭಕ್ಕೆ ಆಗಮಿಸಿದ್ದ ಡಾ. ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ವೀರಕುಮಾರ ಪಾಟೀಲ್‌, ಮೋಟಮ್ಮ, ಚಂದ್ರಪ್ರಭಾ ಅರಸ್‌, ಬಿ.ಎಸ್‌. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ವಧೂವರರಿಗೆ ಶುಭಕೋರಿದರು.

ಹೆಗ್ಗಡೆ ದಂಪತಿಗಳು ಸಪ್ತ ಮಹಾ ವಾಕ್ಯೋಚ್ಛರಣೆ ಮೂಲಕ ತಮ್ಮ ಪುತ್ರಿಗೆ ಸಪ್ತಪದಿ ತುಳಿಸಿ, ವಧುವನ್ನು ಧಾರೆ ಎರೆದುಕೊಟ್ಟರು. ವಿವಾಹದ ನಿಮಿತ್ತ ಮೂರು ದಿನ ಧಾರ್ಮಿಕ ವಿಧಿಗಳು ಜರುಗಲಿದ್ದು, ಗುರುವಾರ ಸಂಜೆ ಮಂಗಳಮಯ ಆರತಕ್ಷತೆ ನಡೆಯಲಿದೆ.

(ಇನ್‌ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X