Get Updates
Get notified of breaking news, exclusive insights, and must-see stories!

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಮತ್ತೊಂದು ಪರಿಸರ ಪ್ರಶಸ್ತಿ

ಬೆಂಗಳೂರು : ಕುಟುಕು ಜೀವದಿಂದ ಕುಂಟುತ್ತಾ ಸಾಗಿರುವ ಸಾರ್ವಜನಿಕ ವಲಯದ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ (ಕೆಐಓಸಿಎಲ್‌)ಗೆ 1999- 2000 ಸಾಲಿನ ಇಂಡೋ - ಜರ್ಮನ್‌ ಗ್ರೀನ್‌ಟೆಕ್‌ ಪರಿಸರ ಪ್ರಶಸ್ತಿ ಲಭಿಸಿದೆ.

ಕುದುರೆ ಮುಖ ಕಬ್ಬಿಣದ ಅದಿರು ಸಂಸ್ಥೆಯ ಜಾಗೃತಾ ಹಾಗೂ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಡಾ. ಜಿ.ಎಸ್‌. ರಾಜಗೋಪಾಲ್‌ ಅವರು ಬುಧವಾರ ಕೇಂದ್ರ ಶಕ್ತಿ ಖಾತೆ ಸಚಿವ ಸುರೇಶ್‌ ಪ್ರಭು ಅವರಿಂದ ನವದೆಹಲಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.

ಪರಿಸರ ರಕ್ಷಣೆಗೆ ಕೆಐಓಸಿಎಲ್‌ ಕೈಗೊಂಡ ಕ್ರಮ ಹಾಗೂ ನೀಡಿದ ಅದ್ಯತೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಗುರುವಾರ ಸಂಸ್ಥೆ ಹೊರಡಿಸಿದ ಮಾಧ್ಯಮ ಪ್ರಕಟಣೆ ತಿಳಿಸಿದೆ. ಇತ್ತೀಚೆಗಷ್ಟೇ ಸಂಸ್ಥೆ ಪರಿಸರ ಕಾಳಜಿಗಾಗಿ ಐಎಸ್‌ಓ 14001 ಪ್ರಮಾಣ ಪತ್ರ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

(ಯುಎನ್‌ಐ- ಇನ್‌ಫೋ ವರದಿ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+