ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ಕೃಷಿ ಪದ್ಧತಿ ಅನುಸರಿಸುವವರಿಗೆ ತೋಟಗಾರಿಕಾ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ತೋಟಗಾರಿಕಾ ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಾಲಿನಿಂದ ತೋಟಗಾರಿಕೆ ಪ್ರಶಸ್ತಿ ನೀಡಲು ನಿರ್ಧರಿಸಿರುವುದಾಗಿ ತೋಟಗಾರಿಕೆ ಇಲಾಖೆ ನಿರ್ದೇಶಕ ಪಿ.ಬಿ. ರಾಮಮೂರ್ತಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು ಇಲಾಖೆಯು 12 ವಿಧದ ತೋಟಗಾರಿಕಾ ಬೆಳೆಗಳಿಗೆ ಪ್ರಶಸ್ತಿ ನೀಡಲಿದ್ದು, 12 ಮಂದಿ ಬೆಳೆಗಾರರು ಈ ಪ್ರಶಸ್ತಿ ಪಡೆಯಲಿದ್ದಾರೆ ಎಂದರು. ಪ್ರತಿ ಪ್ರಶಸ್ತಿ 25 ಸಾವಿರ ರೂಪಾಯಿ ಮತ್ತು ಪಲಕವನ್ನೊಳಗೊಂಡಿರುತ್ತದೆ. ಹೇಗಾದರೂ ಮಾಡಿ ಹೆಚ್ಚು ಇಳುವರಿ ಪಡೆಯುವುದು ಪ್ರಶಸ್ತಿಗೆ ಮಾನದಂಡವಲ್ಲ, ಬದಲಾಗಿ ಪ್ರಗತಿ ಪರ, ಆಧುನಿಕ ಕೃಷಿ ವಿಧಾನ ಅನುಸರಿಸುವ ಬೆಳೆಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ರಾಮ ಮೂರ್ತಿ ಹೇಳಿದರು.

ತೋಟಗಾರಿಕೆ ಪ್ರಶಸ್ತಿಗೆ ಬೆಳೆಗಾರರನ್ನು ಗುರುತಿಸಲು ಸಮಿತಿಯಾಂದನ್ನು ರಚಿಸಲಾಗಿದೆ. ಸಮಿತಿಯ ಸದಸ್ಯರು ಬೆಳೆಗಾರರ ಕೃಷಿ ವಿಧಾನವನ್ನು ಪರಿಶೀಲಿಸುತ್ತಾರೆ. ಪ್ರಶಸ್ತಿಗೋಸ್ಕರ 3 ಲಕ್ಷ ರೂಪಾಯಿಯನ್ನು ಪ್ರತ್ಯೇಕವಾಗಿ ತೆಗೆದಿಡಲಾಗಿದೆ ಎಂದು ಇಲಾಖೆ ನಿರ್ದೇಶಕರು ವಿವರಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X